ಆಳಾಗಬಲ್ಲವನು; ಅರಸಾಗಬಲ್ಲನು.
ಹಿರಿಯರ ಅನುಭವದ ನುಡಿಮುತ್ತೇ ಗಾದೆ. ಕಿರಿಯದಾದ ಮಾತುಗಳಲ್ಲಿ ಹಿರಿಯದಾದ ಅರ್ಥ
ಹೇಳುವುದೇ ಗಾದೆಗಳ ವೈಶಿಷ್ಟ್ಯ. ಗಾದೆಗಳನ್ನು ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವಾಗ, ಬುದ್ಧಿವಾದ
ಹೇಳುವಾಗ ತಪ್ಪನ್ನು ಎತ್ತಿ ತಿಳಿ ಹೇಳುವಾಗ, ವಿಶೇಷ ಗುಣಗಳ ಮಹತ್ತ್ವವನ್ನು ವಿವರಿಸುವಾಗ
ಗಾದೆಗಳನ್ನು ಬಳಸುತ್ತೇ ವೆ. ಅಂತಹ ಗಾದೆಗಳಲ್ಲಿ ಒಂದಾದ್ದು ‘ಆಳಾಗಬಲ್ಲವನು; ಅರಸಾಗಬಲ್ಲನು ’.
‘ಆಳು’ ಎಂದರೆ ಕೆಲಸ ಮಾಡುವವನು, ದುಡಿಯುವವನು ಎಂಬ ಅರ್ಥವಿದೆ. ಅಂಥವನು
‘ಅರಸಾಗಬಲ್ಲ’ ಅಂದರೆ ಒಡೆಯ ಅಥವಾ ಯಜಮಾನನಾಗಬಹದು ಎಂದು ಈ ಗಾದೆ ಸೂಚಿಸುತ್ತದೆ.
ಕೃಷಿ, ಕೈಗಾರಿಕೆ, ವಿದ್ಯಾಸಂಸ್ಥೆ, ಉದ್ಯಮಗಳು ಮುಂತಾದವುಗಳ ಮುಖ್ಯಸ್ಥರಾಗುವವರಿಗೆ ಆಯಾ
ವಿಷಯಗಳ ಮೂಲಭೂತ ವಿಚಾರಗಳ ಅರಿವು ಅಗತ್ಯವಾಗಿಬೇಕು. ಹಾಗಿದ್ದಾಗ ಮಾತ್ರ ಅಲ್ಲಿಯ
ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತವೆ. ಕಾಲಕಾಲಕ್ಕೆ ನಡೆಯಬೇಕಾದ ಕಾರ್ಯಗಳನ್ನು ಕೆಲಸಗಾರರಿಂದ ಸಮರ್ಥವಾಗಿ ನಿರ್ವಹಿಸುವಂತೆ ಮಾಡಲು ಅವನಿಗೆ ಸಾಧ್ಯವಾಗುತ್ತದೆ. ಯಜಮಾನನಿಗೆ ಕೆಲಸದ ಅನುಭವವಿದೆಯೆಂದು ಗೊತ್ತಾದಾಗ ಕೆಲಸಗಾರರು ಅವನ ಮಾತಿಗೆ ಮನ್ನಣೆ ನೀಡುತ್ತಾರೆ. ಹೇಳಿದ ಕೆಲಸವನ್ನು ಸರಿಯಾಗಿ ಮಾಡುತ್ತಾರೆ. ಅದಿಲ್ಲವಾದರೆ ತಮಗೆ ತಿಳಿದಂತೆ ಮಾಡಿ ಕೆಲಸವನ್ನು
ಹಾಳುಮಾಡುತ್ತಾರೆ. ಆದ್ದರಿಂದ ಆಳಾಗಿ ದುಡಿದು ಅನುಭವ ಪಡೆದವನು ಅರಸನಾಗಿ ಯಶಸ್ವಿಯಾಗಬಲ್ಲ
ಎಂದು ಈ ಗಾದೆ ತಿಳಿಸಿ ಹೇಳುತ್ತದೆ.