ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ.
ಮಹತ್ವವನ್ನು ತೋರಿಸುತ್ತವೆ.. ಗಾದೆಗಳು ಕಿರಿದಾದ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ನೀಡುವ
ನುಡಿಮುತ್ತುಗಳಾಗಿವೆ. ಇವು ಸತ್ಯವನ್ನು ಬಿಂಬಿಸುತ್ತವೆ. ಇವು ಹಿರಿಯರ ಅನು ಭವಾಮೃತಗಳು. ನಮ್ಮ
ಬದುಕನ್ನು ಅರ್ಥೈಸಲು ನಮಗೆ ಮಾರ್ಗದರ್ಶಕವಾಗಿದೆ. ಅಂತಹ ಗಾದೆಗಳಲ್ಲಿ ಒಂದಾದದ್ದು, ‘ಸತ್ಯಕ್ಕೆ
ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ.’
‘ಸತ್ಯಮೇವ ಜಯತೇ’ - ‘ಸತ್ಯವೇ ಗೆಲ್ಲುತ್ತದೆ - ಇದು ಒಂದು ಉಪನಿಷತ್ತಿನ ಹೇಳಿಕೆಯಾಗಿದೆ.
ಸತ್ಯಕ್ಕೆ ಎಂದಿಗೂ ಚ್ಯುತಿಯಿಲ್ಲ. ಅದು ಶಾಶ್ವತವಾಗಿರುತ್ತದೆ. ಗಾಂಧೀಜಿ ಅವರು ಆಚರಿಸುತ್ತಿದ್ದ ಏಕಾದಶಿ ವ್ರತಗಳಲ್ಲಿ ಸತ್ಯಕ್ಕೂ ಸ್ಥಾನವನ್ನಿತ್ತಿದ್ದರು.‘ಸತ್ಯಂ ವದ, ಧರ್ಮಂ ಚರ’ - ‘ಸತ್ಯವನ್ನೇ ಹೇಳು, ಧರ್ಮವನ್ನಾಚರಿಸು’ ಇದು ಭಾರತೀಯಸನಾತನ ಧರ್ಮದ ಮಾರ್ಗದರ್ಶಿ ಸೂತ್ರವೆನಿಸಿದೆ.
ಸತ್ಯವನ್ನೇ ಪಾಲಿಸುವವನು ತೊಂದರೆಯನ್ನು ಅನುಭವಿಸಬೇಕಾಗಬಹುದು. ಆದರೆ ಕೊನೆಯಲ್ಲಿ
ಸತ್ಯಕ್ಕೇ ಜಯಲಭಿಸಿ ಆತ ಸುಖವನ್ನು ಅನು ಭವಿಸುವಂತಾಗುತ್ತದೆ. ಇದಕ್ಕೆ ಉದಾಹರಣೆ ಸತ್ಯನಿಷ್ಠನಾದ ಹರಿಶ್ಚಂದ್ರ ಹಾಗೂ ಗೋವಿನ ಹಾಡಿನಲ್ಲಿ ಬರುವ ಪುಣ್ಯಕೋಟಿ ಎಂಬ ಹಸು. “ಸತ್ಯನುಡಿದತ್ತರೂ,
ಸುತನೊಬ್ಬ ಸತ್ತರೂ | ಸತ್ಯವನು ಬಿಡದ ಹರಿಶ್ಚಂದ್ರ ಜಗದೊಳಗೆ| ಸತ್ಯವೇ ನಮ್ಮ ಬಂಧು ಬಳಗ|
ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ” ಎನ್ನುವ ವಾಕ್ಯವಿದೆ. ‘ಸತ್ಯಂ ಶಿವಂ ಸುಂದರಂ’
ಎನ್ನು ವ ಹೇಳಿಕೆಯೂ, ‘ಸತ್ಯವು ಮಂಗಳಕರ ಹಾಗೂ ಸುಂದರವಾದದು’ ಎಂದು ಸೂಚಿಸುತ್ತದೆ.