ಅಲಂಕಾರಗಳು
ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಚಮತ್ಕಾರಿಕ ಮಾತುಗಳಿಗೆ ಅಲಂಕಾರ ಎನ್ನುವರು
ಉದಾ : ೧ ಪೂರ್ವದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತ್ತೈದೆಯ ಹಣೆಯ ಕುಂಕುಮದಂತೆ ಕಾಣುತ್ತಿದ್ದನು.
೨ ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
೩ ಕತ್ತೆಗೆ ಗೊತ್ತೆ? ಹೊತ್ತ ಕತ್ತುರಿಯ ಪರಿಮಳ?
೪ ಎಳೆಗಿಳಿಗಳ ಬಳಗಗಳು ನಳನಳಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದವು.
ಅಲಂಕಾರದಲ್ಲಿ ಶಬ್ದಾಲಂಕಾರ ಮತ್ತು ಅರ್ಥಾಲಂಕಾರ ಎಂಬ ಎರಡು ವಿಧಗಳಿವೆ.
ಶಬ್ದಾಲಂಕಾರ : ಶಬ್ದಗಳ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೌಂದರ್ಯ ಹೆಚ್ಚಿದರೆ ಅದನ್ನು ಶಬ್ದಾಲಂಕಾರ ಎನ್ನುತ್ತಾರೆ. ಇದರಲ್ಲಿ ಅನುಪ್ರಾಸ, ಯಮಕ ಮತ್ತು ಚಿತ್ರ ಕವಿತ್ವ ಎಂದು ಪ್ರಧಾನವಾಗಿ ಮೂರು ವಿಧಗಳಿವೆ. ಅನುಪ್ರಾಸವನ್ನು ವೃತ್ಯನುಪ್ರಾಸ ಮತ್ತು ಛೇಕಾನುಪ್ರಾಸ ಎಂದು ವಿಭಾಗಿಸಲಾಗಿದೆ.
ಅರ್ಥಾಲಂಕಾರ : ಕಾವ್ಯದಲ್ಲಿ ಬಳಸಲಾದ ಪದಗಳ ಅರ್ಥ ಚಮತ್ಕಾರದಿಂದ ಕಾವ್ಯದ ಸೌಂರ್ಯ ಹೆಚ್ಚಾದರೆ ಅದನ್ನು ಅರ್ಥಾಲಂಕಾರ ಎನ್ನುತ್ತಾರೆ.
ಇದರಲ್ಲಿ ನೂರಕ್ಕೂ ಮಿಕ್ಕಿದ ಅಲಂಕಾರಗಳಿವೆ. ಇವುಗಳಲ್ಲಿ ಬರುವ ಉಪಮೇಯ ಉಪಮಾನಗಳ ಸಹಾಯದಿಂದ ಅದು ಯಾವ ಅಲಂಕಾರ ಎಂದುನಿರ್ಧರಿಸಲಾಗುವುದು.
ಉಪಮೇಯ : ಉಪಮೇಯವನ್ನು ವರ್ಣ್ಯ ಎಂತಲೂ ಕರೆಯುವರು. ಆಲಂಕಾರಿಕ ವಾಕ್ಯದಲ್ಲಿ ಯಾವ ವಸ್ತುವನ್ನು ಕುರಿತು ವಣ ðಸಲಾಗುತ್ತದೆಯೋ. ಅದೇ ವರ್ಣ್ಯ ಅಥವಾ ಉಪಮೇಯ.
ಉಪಮಾನ : ಉಪಮಾನವನ್ನು ಅವರ್ಣ್ಯ ಎಂತಲೂ ಕರೆಯುವರು ಯಾವ ವಸ್ತುವನ್ನು ಆಧರಿಸಿ ಅಥವಾ ಮಾನವಾಗಿಟ್ಟುಕೊಂಡು ವಣ ðಸಲಾಗುತ್ತದೆಯೋ ಅದೇ ಅವರ್ಣ್ಯ ಅಥವಾ ಉಪಮಾನ.
ಅರ್ಥಾಲಂಕಾರಗಳ ವಿಧಗಳು
೧.ಉಪಮಾಲಂಕಾರ :
ಉಪಮಾ ಎಂದರೆ ಹೋಲಿಕೆ ಎಂದರ್ಥ. ಯಾವ ಅಲಂಕಾರದಲ್ಲಿ ಉಪಮೇಯ ಉಪಮಾನಗಳೊಳಗೆ ಉಪಮಾ (ಹೋಲಿಕೆ) ಇರುತ್ತದೆಯೋ ಆ ಅಲಂಕಾರವೇ ಉಪಮಾಲಂಕಾರ.
ಉದಾ : ಮನೋರಮೆಯ ಹಣೆ ಬಾಲಚಂದ್ರನಂತೆ ಆಕರ್ಷಣೀ ಯವಾಗಿತ್ತು.
ಮನೋರಮೆಯ ಹಣೆಯನ್ನು ವರ್ಣಿಸುತ್ತಿರುವುದರಿಂದ ಮನೋರಮೆಯ ಹಣೆ ಎಂಬುದು ಉಪಮೇಯವಾಯ್ತು.
ಬಾಲಚಂದ್ರನನ್ನು ಆಧಾರವಾಗಿಟ್ಟುಕೊಂಡು ಮನೋರಮೆಯ ಹಣೆಯನ್ನು ವರ್ಣಿಸುತ್ತಿರುವುದರಿಂದ ಬಾಲಚಂದ್ರ ಎಂಬುದು ಉಪಮಾನವಾಯ್ತು.
ಉಪಮೇಯಕ್ಕೂ ಉಪಮಾನಕ್ಕೂ ಹೋಲಿಕೆಯನ್ನು ಹೇಳುವಂತಹ ಅಂತೆ, ವೋಲ್, ವೊಲ್ ಮುಂತಾದ ಪದಗಳೇ ವಾಚಕ ಪದಗಳು. ಇಲ್ಲಿ ಅಂತೆ, ಎಂಬುದು ವಾಚಕ ಪದ.
ಉಪಮೇಯಕ್ಕೂ ಉಪಮಾನಕ್ಕೂ ಸಮಾನವಾಗಿ ಹೊಂದಿಕೆಯಾಗುವ ಕ್ರಿಯಾಪದವೇ ಸಮಾನಧರ್ಮ. ಇಲ್ಲಿ ಆಕರ್ಷಣೀ ಯವಾಗಿತ್ತು ಎಂಬುದು ಸಮಾನಧರ್ಮ.
ಉಪಮೇಯಕ್ಕೂ ಉಪಮಾನಕ್ಕೂ ಹೋಲಿಕೆಯನ್ನು ಹೇಳಿರುವುದರಿಂದ ಇದು ಉಪಮಾಲಂಕಾರ.
ಉಪಮಾಲಂಕಾರದಲ್ಲಿ ಪೂರ್ಣೋಪಮಾಲಂಕಾರ, ಲುಪ್ತೋಪಮಾಲಂಕಾರ ಎಂಬ ಎರಡು ವಿಧಗಳಿವೆ.
ಪೂರ್ಣೋಪಮಾಲಂಕಾರ : ಯಾವ ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ವಾಚಕ ಪದ, ಸಮಾನಧರ್ಮ ಎಂಬ ನಾಲ್ಕು ಅಂಶಗಳು ಇರುತ್ತವೆಯೋ ಅದೇ ಪೂರ್ಣೋಪಮಾಲಂಕಾರ.
ಉದಾ.: ಬಿರುಗಾಳಿಗೆ ತುತ್ತಾದ ಮರಗಿಡಗಳು ಬೀಳುವಂತೆ ಭರತಕುಲದ ನೂರೈವರು ಬಾಲಕರು ಬಿದ್ದರು.
ಉಪಮೇಯ : ಭರತಕುಲದ ನೂರೈವರು ಬಾಲಕರು
ಉಪಮಾನ : ಬಿರುಗಾಳಿಗೆ ತುತ್ತಾದ ಮರಗಿಡಗಳು
ವಾಚಕಪದ : ಅಂತೆ
ಸಮಾನಧರ್ಮ : ಬೀಳುವುದು
ಅಲಂಕಾರ : ಉಪಮಾಲಂಕಾರ (ಪೂರ್ಣೋಪಮಾಲಂಕಾರ)
ಸಮನ್ವಯ : ಉಪಮೇಯವಾದ ಭರತಕುಲದ ನೂರೈವರು ಬಾಲಕರು ಬಿದ್ದಿರುವುದನ್ನು ಉಪಮಾನವಾದ ಬಿರುಗಾಳಿಗೆ ತುತ್ತಾದ ಮರಗಿಡಗಳಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರ.
ಈ ಅಲಂಕಾರದಲ್ಲಿ ಉಪಮೇಯ, ಉಪಮಾನ, ವಾಚಕಪದ, ಸಮಾನಧರ್ಮ ಎಂಬ ನಾಲ್ಕು ಅಂಶಗಳಿರುವುದರಿಂದ ಇದು ಪೂರ್ಣೋಪಮಾಲಂಕಾರವೂ ಹೌದು.
ಲುಪ್ತೋಪಮಾಲಂಕಾರ: ಇದು ಉಪಮಾಲಂಕಾರದ ಇನ್ನೊಂದು ಪ್ರಭೇದ. ಪೂರ್ಣೋಪ ಮಾಲಂಕಾರವಾಗಬೇಕಾದರೆ ಇರಬೇಕಾದ ನಾಲ್ಕು ಅಂಶಗಳಲ್ಲಿ ಯಾವುದಾದರೂ ಅಂಶ ಇಲ್ಲವಾದರೆ ಅದು ಲುಪ್ತೋಪಮಾಲಂಕಾರವಾಗುತ್ತದೆ. ಯಾವ ಅಂಶ ಲುಪ್ತವಾಗಿದೆಯೋ ಅದೇ ಹೆಸರಿನಿಂದ ಆ ಅಲಂಕಾರವನ್ನು ಕರೆಯಲಾಗುತ್ತದೆ. ಅಂದರೆ ಉಪಮೇಯ ಇಲ್ಲವಾದರೆ ಅದು ಉಪಮೇಯ ಲುಪ್ತೋಮಾಲಂಕಾರ. ಹಾಗೆಯೇ ಉಪಮಾನಲುಪ್ತೋಪಮಾಲಂಕಾರ, ವಾಚಕಲುಪ್ತೋಪಮಾಲಂಕಾರ, ಧರ್ಮಲುಪ್ತೋಪಮಾಲಂಕಾರ, ವಾಚಕಧರ್ಮಲು ಪ್ತೋಪಮಾಲಂಕಾರ ಇತ್ಯಾದಿ ಲುಪ್ತೋಪಮಾಲಂಕಾರಗಳಿವೆ.
೨.ರೂಪಕಾಲಂಕಾರ
ಸೂತ್ರ : ಉಪಮೇಯ, ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ
ಉದಾ.: ಸೀತೆಯ ಮುಖ ಕಮಲ ಅರಳಿತು
ಅಲಂಕಾರ - ರೂಪಕಾಲಂಕಾರ
ಲಕ್ಷಣ: ಉಪಮೇಯ, ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ
ಉಪಮೇಯ - ಸೀತೆಯ ಮುಖ
ಉಪಮಾನ - ಕಮಲ
ಸಮನ್ವಯ - ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿದೆ. ಹಾಗಾಗಿ ಇದು ರೂಪಕಾಲಂಕಾರ
೩. ದೃಷ್ಟಾಂತಾಲಂಕಾರ
ಸೂತ್ರ : ಎರಡು ಬೇರೆ ಬೇರೆ ವಾಕ್ಯಗಳು ಅರ್ಥಸಾದೃಶ್ಯದಿಂದ ಒಂದಕ್ಕೊAದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತಾಲAಕಾರ.
ಮಾತುಬಲ್ಲವನಿಗೆ ಜಗಳವಿಲ್ಲ; ಊಟಬಲ್ಲವನಿಗೆ ರೋಗವಿಲ್ಲ
ಅಲಂಕಾರ : ದೃಷ್ಟಾಂತಾಲಂಕಾರ
ಲಕ್ಷಣ:ಎರಡು ಬೇರೆ ಬೇರೆ ವಾಕ್ಯಗಳು (ರ್ಣಿಸುವ ವಿಷಯದ ವಾಕ್ಯ ಅರ್ಣ್ಯವಿಷಯ ವಾಕ್ಯಗಳು) ರ್ಥಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬವಾದಂತೆ (ಒಂದರ ಪ್ರತಿಬಿಂಬ ಮತ್ತೊಂದೆನ್ನುವ ಭಾವದಂತೆ) ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು
ಉಪಮೇಯ : ಮಾತುಬಲ್ಲವನಿಗೆ ಜಗಳವಿಲ್ಲ
ಉಪಮಾನ : ಊಟಬಲ್ಲವನಿಗೆ ರೋಗವಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ಮಾತುಬಲ್ಲವನಿಗೆ ಜಗಳವಿಲ್ಲ ಹಾಗೂ ಉಪಮಾನವಾದ ಊಟಬಲ್ಲವನಿಗೆ ರೋಗವಿಲ್ಲ ಎಂಬ ವಾಕ್ಯಗಳಲ್ಲಿ ಬಿಂಬ ಪ್ರತಿಬಿಂಬ ಭಾವ ತೋರುತ್ತಿರುವುದರಿಂದ ಇದು ದೃಷ್ಟಾಂತಾಲಂಕಾರವಾಗಿದೆ
೪.ಉತ್ಪ್ರೇ ಕ್ಷಾಲಂಕಾರ
ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ ಉತ್ಪ್ರೇ ಕ್ಷಾಲಂಕಾರ .
ಉದಾ : ಅಚ್ಛೋದ ಸರೋವರವು ತ್ರೆöÊಲೋಕ್ಯಲಕ್ಷಿö್ಮಯು ತನ್ನ ಸೌಂರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.
ಉಪಮೇಯ : ಅಚ್ಛೋದ ಸರೋವರ
ಉಪಮಾನ : ರನ್ನಗನ್ನಡಿ
ಅಲಂಕಾರ : ಉತ್ಪೇಕ್ಷಾಲಂಕಾರ
ಸಮನ್ವಯ : ಉಪಮೇಯವಾದ ಅಚ್ಛೋದ ಸರೋವರವನ್ನು ಉಪಮಾನವಾದ ರನ್ನಗನ್ನಡಿ ಎಂಬುದಾಗಿ ಕಲ್ಪಿಸಿರುವುದರಿಂದ ಇದು ಉತ್ಪ್ರೇ ಕ್ಷಾಲಂಕಾರ ವಾಗಿದೆ.
೫.ಶ್ಲೇಷಾಲAಕಾರ
ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥಕೊಡುವಂತಿದ್ದರೆ ಅಂತಹ ಪದಕ್ಕೆ ‘ಶ್ಲೇಷಪದ’ ಎಂದು ಹೆಸರು, ಇಂತಹ ಶ್ಲೇಷಾರ್ಥಗಳನ್ನು ನೀಡಬಲ್ಲ ಪದಗಳಿರುವ ಅಲಂಕಾರವನ್ನು ಶ್ಲೇಷಾಲಂಕಾರ ಎಂದು ಕರೆಯುತ್ತಾರೆ.
ಉದಾ : ಅತಿಶಯ ಪದಾರ್ಥ ನಿಕರ |
ಪ್ರತೀತಿಯಂ ಪಡೆವ ಪಾದವಿನ್ಯಾಸಂ ಭೂ ||
ನುತಮಾಗದಲ್ತೆನಿರ್ದೋ |
ಷತೆಯಿಂದಲ್ಲದೆ ಸಮಂತು ಕವಿಗಂ ರವಿಗಂ ||
ಇಲ್ಲಿ ಕವಿ ಮತ್ತು ರವಿ ಒಂದೇ ಬಗೆಯ ಪದಗಳಿಂದ ವಣ ðತರಾಗಿದ್ದಾರೆ. ಈ ವರ್ಣನೆಯಲ್ಲಿ ಪದಾರ್ಥ, ಪಾದ, ನಿರ್ದೋಷತೆ ಎಂಬ ಪದಗಳು ಶ್ಲೇಷಾರ್ಥದಿಂದ ಕೂಡಿವೆ. ಅವನ್ನು ಪರಿಶೀಲಿಸೋಣ.
ಲಕ್ಷಣ : ಒಂದು ಪದವು ಒಂದಕ್ಕಿAತ ಹೆಚ್ಚು ಅರ್ಥಕೊಡುವಂತಿದ್ದರೆ ಅಂತಹ ಪದಕ್ಕೆ ‘ಶ್ಲೇಷಪದ’ ಎಂದು ಹೆಸರು, ಇಂತಹ ಶ್ಲೇಷಾರ್ಥಗಳನ್ನು ನೀಡಬಲ್ಲ ಪದಗಳಿರುವ ಅಲಂಕಾರವನ್ನು ಶ್ಲೇಷಾಲಂಕಾರ ಎಂದು ಕರೆಯುತ್ತಾರೆ.
ಪದ ಕವಿಯ ಪರವಾಗಿ ರವಿಯ ಪರವಾಗಿ
೧. ಪದಾರ್ಥ - ಪದದ ಅರ್ಥ (ಶಬ್ದಾರ್ಥ) - ವಸ್ತು
೨. ಪಾದ - ಪದ್ಯದ ಸಾಲು - ಕಿರಣ
೩. ನಿರ್ದೋಷತೆ - ದೋಷವಿಲ್ಲದಿರುವಿಕೆ - ಕತ್ತಲಿಲ್ಲದಿರುವಿಕೆ (ಹಗಲು)
೬.ಅರ್ಥಾಂತರನ್ಯಾಸಾಲಂಕಾರ
"ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ ಅರ್ಥಾಂತರನ್ಯಾಸಾಲಂಕಾರ
ಆತನು ಪರೀಕ್ಷೆಯಲ್ಲಿ ಪ್ರಥಮಸ್ಥಾನ ಪಡೆದು ಉತ್ತೀರ್ಣನಾದನು. ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ?
ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತರ್ಣನಾದನು; ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ?
ಅಲಂಕಾರ : ಅರ್ಥಾಂತರನ್ಯಾಸಾಲಂಕಾರ
ಲಕ್ಷಣ"ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ ರ್ಥಾಂತರನ್ಯಾಸಾಲಂಕಾರವೆನಿಸುವುದು
ಉಪಮೇಯ : ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತರ್ಣನಾದನು
ಉಪಮಾನ : ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ?
ಸಮನ್ವಯ : ಇಲ್ಲಿ ಉಪಮೇಯವಾದ ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತರ್ಣನಾದನು ಎಂಬ ವಿಶೇಷ ವಾಕ್ಯವನ್ನು ಉಪಮಾನವಾದ ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ? ಎಂಬ ಸಾಮಾನ್ಯವಾಕ್ಯವು ಸಮರ್ಥನೆ ಮಾಡುತ್ತಿರುವುದರಿಂದ ಇದು ಅರ್ಥಾಂತರನ್ಯಾಸಾಲಂಕಾರ .
ಜಲನಿಧಿಜಲಮಂ ಜಲಭೃ |
ತ್ಕುಲಕ್ಕೆ ನಲಿದಿತ್ತುದತ್ತಮಿತ್ತನದೀನಿ |
ರ್ಮಲ ಸಲಿಲಂ ದೊರೆದುದು ಗಡ |
ನೆಲದೊಳ್ ಕೊಟ್ಟಂಗೆ ಬಡತನಂ ಬಂದಪುದೇ ||
ಅಲಂಕಾರ : ರ್ಥಾಂತರನ್ಯಾಸಾಲಂಕಾರ
ಲಕ್ಷಣ"ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ ರ್ಥಾಂತರನ್ಯಾಸಾಲಂಕಾರವೆನಿಸುವುದು
ಉಪಮೇಯ : ಜಲನಿಧಿ ಜಲಮಂ ಜಲಭೃತ್ಕುಲಕ್ಕೆ ನಲಿದಿತ್ತುದು ; ಇತ್ತ ನದೀನಿರ್ಮಲ ಸಲಿಲಂದೊರೆದುದು.’ (ಸಮುದ್ರವು ನೀರನ್ನು ಮೋಡಗಳಿಗೆ ನೀಡಿತು; ಮೋಡದಿಂದ ಮಳೆ ಸುರಿದು ನದಿಗಳಲ್ಲಿ ತುಂಬಿ ಪುನಃ ಸಮುದ್ರಕ್ಕೆ ಹೋಯಿತು.) (ವಿಶೇಷವಾಕ್ಯ)
ಉಪಮಾನ : ‘ನೆಲದೊಳ್ ಕೊಟ್ಟಂಗೆ ಬಡತನಂ ಬಂದಪುದೇ’ (ಲೋಕದಲ್ಲಿ ಕೊಟ್ಟವನಿಗೆ ಬಡತನ ಬರುವುದಿಲ್ಲ) (ಸಾಮಾನ್ಯ ವಾಕ್ಯ)
ಸಮನ್ವಯ : ‘ಇಲ್ಲಿಜಲನಿಧಿಜಲಮಂ ಜಲಭೃತ್ಕುಲಕ್ಕೆ ನಲಿದಿತ್ತುದು; ಇತ್ತ ನದೀ ನಿರ್ಮಲ ಸಲಿಲಂದೊರೆದುದು’ ಎಂಬ ಉಪಮೇಯ ವಾಕ್ಯವನ್ನು ನೆಲದೊಳ್ ಕೊಟ್ಟಂಗೆ ಬಡತನಂ ಬಂದಪುದೇ’ ಎಂಬ ಉಪಮಾನ ವಾಕ್ಯದಿಂದ ಸಮರ್ಥನೆ ಮಾಡಿರುವುದರಿಂದ ಇದನ್ನು ಅರ್ಥಾಂತರನ್ಯಾಸಾಲAಕಾರ ಎಂದು ಹೇಳಬಹುದು.