೧೦ನೆಯ ತರಗತಿ
ಪ್ರಥಮಭಾಷೆ ಕನ್ನಡ ಪ್ರಶ್ನೋತ್ತರಗಳು
ಗದ್ಯಭಾಗ-೧ ನಮ್ಮ ಭಾಷೆ – ಎಂ ಮರಿಯಪ್ಪಭಟ್ಟ.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
೧. ಭಾಷೆ ಯಾವುದಕ್ಕೆ ಸಾಧನವಾಗಿದೆ ?
ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯಸಾಧನವಾಗಿದೆ.
೨. ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ
?
ಮಕ್ಕಳಿಗೆ ಮೊಲೆಯೂಡುವ
ಎಲ್ಲ ಪ್ರಾಣಿಗಳೂ ಚಲನವಲನಗಳ ವಿಷಯವಾಗಿ, ಆಹಾರ ವಿಚಾರಗಳ ವಿಚಾರವಾಗಿ ತರಪೇತು ಕೊಡುತ್ತವೆ
೩. ಮನುಷ್ಯನಿಗೆ ಲೆಕ್ಕವಿಡುವ ಆವಶ್ಯಕತೆ ಯಾವಾಗ ಉಂಟಾಯಿತು ?
ನವಶಿಲಾಯುಗದ ಮಾನವ, ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ,ಬದುಕು ಮೊದಲಾದ
ಭಾವನೆಗಳನ್ನು ತಳೆಯುವುದಕ್ಕೆ ಎಂದು ಮೊದಲು ಮಾಡಿದನೋ ಅಂದು ಆತನಿಗೆಲೆಕ್ಕವಿಡುವ ಆವಶ್ಯಕತೆ ಉಂಟಾಯಿತು.
೪. ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು
ಯಾರು ?
ಎಣ್ಣೆ ತುಪ್ಪದ ಮಿಶ್ರಣ
ಬೇಡವೆಂದು ಹೇಳಿದವರು ನಯಸೇನ
೫. ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು ?
ಮಹಮ್ಮದೀಯರ ಆಳ್ವಿಕೆಯ
ಅವಧಿಯಲ್ಲಿ ಪರ್ಷಿಯನ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದಿವೆ.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
೧. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು ?
ವ್ಯಾವಹಾರಿಕವೆಂದರೆ ಜೀವದ್ಭಾಷೆ,
ಅದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ,ಉದಾಹರಣೆ ಕನ್ನಡ, ತಮಿಳು, ತೆಲುಗು, ತುಳು, ಮರಾಠಿ, ರ್ದು, ಇಂಗ್ಲಿಷ್ ಎಲ್ಲಾ
ವ್ಯಾವಹಾರಿಕ ಭಾ಼ಷೆಗಳು ಗ್ರಾಂಥಿಕ ಭಾಷೆಯಾಗಬೇಕಾಗಿಲ್ಲ.
ಉದಾಹರಣೆ ತುಳು ಒಂದು ಸುಂದರ ವ್ಯಾವಹಾರಿಕ ಭಾಷೆ ಆದರೆ ಈ ಭಾಷೆಯಲ್ಲಿ ಯಾವ ಗ್ರಂಥಗಳು ಇದೂವರೆಗೂ ರಚನೆಯಾಗಿಲ್ಲ. ಗ್ರಾಂಥಿಕವೆಂದರೆ ಅಭಿವೃದ್ಧಿ
ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾದ ಭಾಷೆ, ಸಂಸ್ಕೃತ, ಕನ್ನಡ, ಇಂಗ್ಲಿಷ್, ಪಾಳಿ,ಇತ್ಯಾದಿ ಈ ರ್ಗಕ್ಕೆ
ಉದಾಹರಣೆ .ಎಲ್ಲಾ ಗ್ರಾಂಥಿಕ ಭಾಷೆಗಳು ವ್ಯಾವಹಾರಿಕ ಭಾಷೆಯಾಗಿರಬೇಕಿಲ್ಲ. ಉದಾಹರಣೆ ಸಂಸ್ಕೃತ ಒಂದು
ಮಹಾನ್ ಗ್ರಾಂಥಿಕ ಭಾಷೆಯಾದರೂ ಎಲ್ಲೂ ವ್ಯಾವಹಾರಿಕ ಭಾಷೆಯಾಗಿ ಬಳಕೆಯಲ್ಲಿಲ್ಲ.
೨. ಲಿಪಿಯ ಜಾಡು ಆರಂಭಗೊಂಡ ಬಗೆ ಹೇಗೆ ?
ಯಾವ ಓದುಬರೆಹವಿಲ್ಲದ ಹಳ್ಳಿಯ ಕೆಲಸಗಾರನಾದರೂ ಸರಿಯೆ, ತಾನು ದಿನಗೆಲಸಕ್ಕೆ ಹೋದ ಲೆಕ್ಕವನ್ನು ಗೋಡೆಯ ಮೇಲೆ ದಿನಂಪ್ರತಿ ಒಂದೊಂದು
ಗೆರೆ ಎಳೆದುಗುರುತಿಸಿ, ಕೊನೆಯಲ್ಲಿ ಎಣಿಸಿ
ಲೆಕ್ಕಹಾಕಿ ಸಂಬಳವನ್ನು ಪಡೆಯುತ್ತಾನೆ. ಹಾಲು ಮಾರುವವರೂ
ಹೀಗೆಯೇ ಲೆಕ್ಕವಿಡುವುದುಂಟು. ಪ್ರಾಕ್ತನ ವಿರ್ಶಕ ಸುಮರ್ , ನೈಲ್ (ಈಜಿಪ್ಟ್), ಕ್ರಿಟಗಿರಿ ಇತ್ಯಾದಿ
ಪ್ರದೇಶಗಳಲ್ಲಿ ಉಪಲಬ್ದವಾದ ಅತ್ಯಂತ ಪುರಾತನ ಅವಶೇಷಗಳಲ್ಲಿ ವ್ಯಾಪಾರ, ವ್ಯವಹಾರ ಲೆಕ್ಕಗಳಿಗೆ
ಸಂಬಂಧಿಸಿದ ಈ ಬಗೆಯ ಲಿಪಿ ಸಾಕ್ಷ್ಯಗಳನ್ನು ಕಂಡುಕೊಂಡಿದ್ದಾರೆ. ಹೀಗೆ ಲಿಪಿಯ ಜಾಡು. ಆರಂಭವಾಯಿತು.
೩. ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು ?
ಮಾನವನಿಗೆ ಬಿಡುವು ಹೆಚ್ಚಿದಂತೆ,
ಜೀವನದ ಸೌರ್ಯಗಳನ್ನು ವಿಶಿಷ್ಟ ಮೇಧಾಶಕ್ತಿಯಿಂದ
ಅಭಿವೃದ್ಧಿಗೊಳಿಸುತ್ತಾ ಹೋದಂತೆ ತನ್ನ
ಆಗುಹೋಗುಗಳನ್ನು, ಸುಖ ದುಃಖಗಳನ್ನು ಕಾವ್ಯರೂಪಕ್ಕೆ ಇಳಿಸುವ ಮಾರ್ಗವನ್ನು
ಕಂಡುಕೊಂಡನು. ಸಾಹಿತ್ಯ ವಿವಿಧ ರೂಪದಲ್ಲಿ ಬೆಳೆಯಿತು.. ಲೆಕ್ಕಪತ್ರಗಳನ್ನಿಡಲು ಉಪಯುಕ್ತವಾದ ಮೂಲಲಿಪಿಯನ್ನು
ಮತ್ತಷ್ಟು ಪರಿಷ್ಕರಿಸುತ್ತಾ ಸುಂದರವಾದ ಸಾಹಿತ್ಯ ಕೃತಿಗಳನ್ನು ಬರೆದಿಡುವುದನ್ನು ಮಾನವ ಕಲಿತುಕೊಂಡ.
ಆ ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಜ್ಞಾನ ಭಂಡಾರ ಭದ್ರವಾಯಿತು.
೪. ಕನ್ನಡ ಭಾಷೆ ಹದಗೊಂಡದ್ದು ಹೇಗೆ ?
ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು
ಸಾರಿದ್ದಾರೆ. ಅಂಥವರ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಮುಂದೆ ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣವರೇಣ್ಯರು, ಚಾಮರಸ,ಕುಮಾರವ್ಯಾಸರಂತಹ
ಕವಿಪುಂಗವರು,ಪುರಂದರದಾಸ, ಕನಕದಾಸರಂತಹ ದಾಸ ಶೇಷ್ಠರು ಸುಲಭ ಮರ್ಗವನ್ನೇ ತುಳಿದರು. ತಮ್ಮ ತಮ್ಮ
ಅನುಭವಸಾರವನ್ನುಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು.
ಹೀಗೆ ಕನ್ನಡ ಭಾಷೆ ಹದಗೊಂಡಿತು.
೬. ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವೇನು ?
ನಾಲ್ಕೈದು ಶತಮಾನಗಳ ಹಿಂದೆ ಆಂಗ್ಲಭಾಷೆ ಯೂರೋಪಿನ ಸಾಮಾನ್ಯಭಾಷೆಗಳಲ್ಲಿ
ಒಂದಾಗಿತ್ತು. ದೇಶ ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿ ಯನ್ನು ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ
ಅಭ್ಯಸಿಸಿದರು. ತನ್ಮೂಲಕ ತಮ್ಮಭಾಷೆ ಮತ್ತು ಸಾಹಿತ್ಯವನ್ನು ಹಿಗ್ಗಿಸಿದರು, ಅರಳಿಸಿದರು. ಎಲ್ಲಕ್ಕೂ ಮೇಲಾಗಿ ಮಹಾ ಮೇಧಾವಿಗಳು ತಮ್ಮಆಸೆ, ಆಕಾಂಕ್ಷೆ, ವಿಚಾರ ಮುಂತಾದುವನ್ನು
ಆ ಭಾಷೆಯ ಮುಖಾಂತರವಾಗಿಯೇ ಹೇಳಬೇಕೆಂಬ ಉಜ್ವಲ ಅಭಿಮಾನವುಳ್ಳವರಾಗಿದ್ದರು. ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ರ್ಥಶಾಸ್ತçಜ್ಞರು ಹೀಗೆ ಎಲ್ಲರೂ ತಮ್ಮಭಾಷೆಯನ್ನೇ ಬಳಸಿದುದರ ಪರಿಣಾಮವಾಗಿ ಆಂಗ್ಲ
ಭಾಷೆ ವಿಶ್ವವ್ಯಾಪಿಯಾಯಿತು
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ
೧. ಭಾಷೆ ಸತ್ವಪರ್ಣವಾಗಿ ವಿಕಾಸಗೊಳ್ಳುವುದು ಯಾವಾಗ ?
ಒಂದು ಭಾಷೆ ಸತ್ವಪರ್ಣವಾಗಬೇಕಾದರೆ ಅದನ್ನಾಡುವ ಜನ ಅಭಿಮಾನಧನರೂ ಬುದ್ಧಿಶಾಲಿಗಳೂಪ್ರಯೋಗಶೀಲರೂ
ಆಗಿರಬೇಕು. ನಾಲ್ಕೈದು ಶತಮಾನಗಳ ಹಿಂದೆ ಆಂಗ್ಲಭಾಷೆ ಯೂರೋಪಿನ ಸಾಮಾನ್ಯಭಾಷೆಗಳಲ್ಲಿ ಒಂದಾಗಿತ್ತು.
ಆಂಗ್ಲ ಜನತೆ ಸಾಹಸಜೀವಿಯಾಯಿತು. ಬುದ್ಧಿಶಾಲಿಯಾಯಿತು. ಸರ್ಯನುಎಂದೂ ಮುಳುಗನೆನ್ನುವಂತಹ ವಿಸ್ತಾರವಾದ
ಸಾಮ್ರಾಜ್ಯವನ್ನು ಸ್ಥಾಪಿಸಿತು. ದೇಶ ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು
ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ ಅಭ್ಯಸಿಸಿದರು. ತನ್ಮೂಲಕ ತಮ್ಮಭಾಷೆ ಮತ್ತು ಸಾಹಿತ್ಯವನ್ನು
ಹಿಗ್ಗಿಸಿದರು, ಅರಳಿಸಿದರು. ಎಲ್ಲಕ್ಕೂ
ಮೇಲಾಗಿ ಮಹಾ ಮೇಧಾವಿಗಳು ತಮ್ಮಆಸೆ, ಆಕಾಂಕ್ಷೆ, ವಿಚಾರ ಮುಂತಾದುವನ್ನು ಆ ಭಾಷೆಯಮುಖಾಂತರವಾಗಿಯೇ ಹೇಳಬೇಕೆಂಬ ಉಜ್ವಲ ಅಭಿಮಾನವುಳ್ಳವರಾಗಿದ್ದರು.
ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ರ್ಥಶಾಸ್ತçಜ್ಞರು ಹೀಗೆ ಎಲ್ಲರೂ
ತಮ್ಮಭಾಷೆಯನ್ನೇ ಬಳಸಿದುದರ ಪರಿಣಾಮವಾಗಿಹಾಗೂ ಆಂಗ್ಲ ಜನರ ಸಂಕಲ್ಪ, ಕೃಷಿ ಕಾರಣದಿಂದ ಆ ಭಾಷೆ ಬೆಳೆದು ಇಂದು ಪ್ರಪಂಚದ ದೊಡ್ಡ ಭಾಷೆಗಳಲ್ಲಿ
ಒಂದಾಗಿದೆ.
.೨. ಕನ್ನಡಭಾಷೆ
ಸಮೃದ್ಧವಾಗಿ ರೂಪುಗೊಂಡ ಬಗೆ ಹೇಗೆ ? ವಿವರಿಸಿ.
ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು
ಸಾರಿದ್ದಾರೆ. ಅಂಥವರ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಮುಂದೆ ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣವರೇಣ್ಯರು,
ಚಾಮರಸ, ಕುಮಾರವ್ಯಾಸರಂತಹ ಕವಿಪುಂಗವರು, ಪುರಂದರದಾಸ, ಕನಕದಾಸರಂತಹ ದಾಸ
ಶೇಷ್ಠರು ಸುಲಭ ಮರ್ಗವನ್ನೇ ತುಳಿದರು. ತಮ್ಮ ತಮ್ಮ ಅನುಭವಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ
ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ಹೀಗೆ ಕನ್ನಡ ಭಾಷೆ ಹದಗೊಂಡುದರಿಂದ ಅದು ಸುಲಿದ
ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ ಎಂದು ಕವಿ ಮಹಲಿಂಗರಂಗ
ಉದ್ಘೋಷಿಸಲು ಸಾಧ್ಯವಾಯಿತು. ಸಂಸ್ಕೃತ, ಪ್ರಾಕೃತ ಭಾಷೆಗಳಿಂದ (ತತ್ಸಮ ತದ್ಭವಗಳಾಗಿ) ಅನೇಕ ಶಬ್ದಗಳನ್ನು ಕನ್ನಡ
ತನ್ನಲ್ಲಿ ಅಳವಡಿಸಿಕೊಂಡಿದೆ. ಮಹಮ್ಮದೀಯರ ಆಳ್ವಿಕೆಯ ಅವಧಿಯಲ್ಲಿ ರ್ಷಿಯನ್ ಭಾಷೆಯಿಂದ ಅನೇಕ ಶಬ್ದಗಳು
ಕನ್ನಡಕ್ಕೆ ಬಂದಿವೆ. ಹಾಗೆಯೇ ಅಸಂಖ್ಯಾತ ಇಂಗ್ಲಿಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದು
ಬಿಟ್ಟಿವೆ.ಪೋರ್ಚುಗೀಸಿನಿಂದ ಕೆಲವು ಸ್ವಾರಸ್ಯ
ಪದಗಳು ಆಗಮಿಸಿವೆ.ಕನ್ನಡವೂ ಅದರ ನೆರನುಡಿಗಳೂ ಪರಸ್ಪರ ಎರವುಗಳಿಂದ ಅಭಿವೃದ್ಧಿ ಹೊಂದುತ್ತಲಿವೆ. ಭಾಷೆಯಲ್ಲಿದ್ದ
ಸಾಮಗ್ರಿಯನ್ನೇ ಉಪಯೋಗಿಸಿಕೊಂಡು ಭಾಷಾಭಿವೃದ್ಧಿಯನ್ನು ಮಾಡುವ ಇನ್ನೊಂದು ವಿಧಾನ ನುಡಿಗಟ್ಟುಗಳಿಗೆ ಸೇರಿದುದು. ಕನ್ನಡದ ಅನೇಕ ಅಂದವಾದ
ನುಡಿಗಟ್ಟುಗಳು ಕನ್ನಡ ಭಾಷೆಯನ್ನು ಮೆರಗುಗೊಳಿಸಿವೆ.. ಹೀಗೆ ಹಲವಾರು ಅಂಶಗಳಿಂದ ಕನ್ನಡಭಾಷೆ ಸಮೃದ್ಧವಾಗಿ
ರೂಪುಗೊಂಡಿದೆ.
ಈ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ
೧. “ಸಂಸ್ಕೃತಿಯ ಇತಿಹಾಸ
ಉಳಿಯಿತು”
ಆಯ್ಕೆ: ಈ ವಾಕ್ಯವನ್ನು ಶ್ರೀಯುತ ಎಂ. ಮರಿಯಪ್ಪ ಭಟ್ಟರ “ಕನ್ನಡ
ಸಂಸ್ಕೃತಿ”ಎಂಬ ಪ್ರಬಂಧ ಸಂಕಲನದಿಂದ ಆಯ್ದ ನಮ್ಮಭಾಷೆ
ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು
ಲೇಖಕರು ಮಾನವ ಲೆಕ್ಕಪತ್ರಗಳನ್ನಿಡಲು ಉಪಯುಕ್ತವಾದ ಭಾಷೆಯನ್ನು ಪರಿಷ್ಕರಿಸಿ ತನ್ನ ಆಗುಹೋಗುಗಳನ್ನು ,ಸುಖದುಃಖಗಳನ್ನು
ಕಾವ್ಯರೂಪಕ್ಕೆ ಇಳಿಸಿ ಸುಂದರ ಸಾಹಿತ್ಯ ಕೃತಿಗಳನ್ನು ಬರೆಯಲು ಕಲಿತಕೊಂಡ. ಜ್ಞಾನ ಭಂಡಾರ ಭದ್ರವಾಯಿತು
ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ.
ಸ್ವಾರಸ್ಯ:
ಲಿಪಿಯ ಮೂಲಕ ಸಾಹಿತ್ಯ ಕೃತಿಗಳ ರಚನೆಯಾಗಿ ಜ್ಞಾನಭಂಡಾರ ಭದ್ರವಾಯಿತು ಆ ಮೂಲಕ ಸಂಸ್ಕೃತಿಯ
ಇತಿಹಾಸ ಉಳದು ಪ್ರಗತಿಪಥ ಸುಗಮವಾದ ಬಗೆಯನ್ನು ಸ್ವಾರಸ್ಯಪೂರ್ಣವಾಗಿ ಹೇಳಲಾಗಿದೆ.
೨. “ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ’
ಆಯ್ಕೆ: ಈ ವಾಕ್ಯವನ್ನು
ಶ್ರೀಯುತ ಎಂ. ಮರಿಯಪ್ಪ ಭಟ್ಟರ “ಕನ್ನಡ ಸಂಸ್ಕೃತಿ”ಎಂಬ
ಪ್ರಬಂಧ ಸಂಕಲನದಿಂದ ಆಯ್ದ ನಮ್ಮಭಾಷೆ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕನ್ನಡದ ಅನೇಕ ಕವಿಗಳು ಕನ್ನಡವನ್ನು ಸಂಸ್ಕೃತಮಯವನ್ನಾಗಿಸಿದ ಪರಿಸ್ಥಿತಿಯನ್ನು
ಗಮನಿಸಿದ ೧೨ನೆಯ ಶತಮಾನದ ಕವಿ ನಯಸೇನನು “ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ’ಎಂಬ ಮಾತನ್ನು ಹೇಳಿದ್ದಾನೆ
ಎಂದು ಲೇಖಕರು ಈ ಮಾತನ್ನು ಉಲ್ಲೇಖಿಸಿದ್ದಾರೆ.
ಸ್ವಾರಸ್ಯ: ನಮಗೆ ತುಪ್ಪವೂ ಬೇಕು; ಎಣ್ಣೆಯೂ ಬೇಕು. ಸಂಸ್ಕೃತವೂ ಬೇಕು; ಕನ್ನಡವೂ ಬೇಕು. ಆದರೆ ಎಣ್ಣೆ-ತುಪ್ಪದ ಅಸ್ವಾದು ಮಿಶ್ರಣಬೇಡ, ಎಂಬ ನಯಸೇನನ ಅಭಿಮತ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೩. “ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ’
ಆಯ್ಕೆ: ಈ ವಾಕ್ಯವನ್ನು ಶ್ರೀಯುತ
ಎಂ. ಮರಿಯಪ್ಪ ಭಟ್ಟರ “ಕನ್ನಡ ಸಂಸ್ಕೃತಿ”ಎಂಬ ಪ್ರಬಂಧ
ಸಂಕಲನದಿಂದ ಆಯ್ದ ನಮ್ಮಭಾಷೆ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕನ್ನಡದ ಕವಿಪುಂಗವರು, ಶರಣರು, ದಾಸಶ್ರೇಷ್ಠರು ತಮ್ಮ ಅನುಭವಸಾರವನ್ನು ಸುಲಭವೂ, ಸುಂದರವೂ ಆದ ಮಾತುಗಳಿಂದ ಹೃದಯಮುಟ್ಟುವಂತೆ ಅಭಿವ್ಯಕ್ತಪಡಿಸಿದರು ಆಗ ಕನ್ನಡಭಾಷೆ
ಹದಗೊಂಡಿತು. ಹೀಗೆ ಹದಗೊಂಡ ಕನ್ನಡಭಾಷೆ “ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ’ಎಂದು ಕವಿ ಮಹಲಿಂಗರಂಗ ಉದ್ಘೋಷಿಸಿದ್ದಾನೆ ಎಂದು
ಮಹಲಿಂಗರಂಗನ ಮಾತುಗಳನ್ನು ಕವಿ ಉಲ್ಲೇಖಿಸಿದ್ದಾರೆ.
ಸ್ವಾರಸ್ಯ:
ಕನ್ನಡಭಾಷೆ ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ, ಸುಲಭವೂ ರುಚಿಯುಳ್ಳದ್ದೂ ಆಗಿದೆ ಎಂಬ ಮಾತುಗಳ
ಮೂಲಕ ಕನ್ನಡಭಾಷೆಯ ಸರಳತೆಯನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ.
೪. “ಒಬ್ಬ ತಾಯಿಯ ಗಾನದ ಶ್ರುತಿಯಂತೆ”
ಆಯ್ಕೆ: ಈ ವಾಕ್ಯವನ್ನು ಶ್ರೀಯುತ
ಎಂ. ಮರಿಯಪ್ಪ ಭಟ್ಟರ “ಕನ್ನಡ ಸಂಸ್ಕೃತಿ”ಎಂಬ ಪ್ರಬಂಧ
ಸಂಕಲನದಿಂದ ಆಯ್ದ ನಮ್ಮಭಾಷೆ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಲೇಖಕರಾದ
ಎಂ. ಮರಿಯಪ್ಪಭಟ್ಟರು ಹೇಳಿದ್ದಾರೆ. ಎಲ್ಲಾ ಭಾಷೆಗಳಿಗೂ ಅದರದೇ ಆಧ ಸ್ಥಾನಮಾನವಿದೆ . ಒಬ್ಬ ತಾಯಿಯ
ಗಾನದ ಶೃತಿಯಂತೆ ಎಲ್ಲಕ್ಕೂ ಅಷ್ಟೇ ಸ್ಥಾನವಿದೆ ಎಂದು ಹೇಳುವ ಸಂದರ್ಭದಲ್ಲಿ ಈ
ಮಾತು ಬಂದಿದೆ.
ಸ್ವಾರಸ್ಯ: ಭಾರತೀಯರಾದ ನಾವು ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೆ, ನಮ್ಮ ನಮ್ಮ ಭಾಷೆಗಳನ್ನು ಗೌರವಿಸಿ, ಪ್ರೀತಿಸಬೇಕು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ.