ಸಾವಯವ ಕೃಷಿ
ಪೀಠಿಕೆ:- ಸಾವಯವ ಎಂದರೆ ಕೊಳೆಯಬಹುದಾದ ವಸ್ತುಗಳು . ಅಂದರೆ ನಾವು ಯಾವುದಾದರೊಂದು ವಸ್ತುವನ್ನು ಭೂಮಿಗೆ ಎಸೆದಾಗ ಅದು ಕೆಲವು ದಿನದಲ್ಲಿ ಮಣ್ಣಿನೊಂದಿಗೆ ಬೆರೆತು ಗೊಬ್ಬರವಾಗುತ್ತದೆ. ಉದಾಹರಣೆಗೆ ಸಸ್ಯಗಳ ಅವಶೇಷಗಳು, ಪ್ರಾಣಿಗಳ ಅವಶೇಷಗಳು, ಬಟ್ಟೆ, ಕಾಗದ, ಕಬ್ಬಿಣ ಮೊದಲಾದವು, ಇವು ಭೂಮಿಯಲ್ಲಿ ಕೊಳೆತಾಗ ಮಣ್ಣಿನ ಭಾಗವೇ ಅಗುತ್ತದೆ. ಆ ಮಣ್ಣಿಗೆ ಹೆಚ್ಚಿನ ಫಲವತ್ತತೆ ತಂದುಕೊಡುತ್ತದೆ.
ವಿಷಯ ನಿರೂಪಣೆ:- ಆಧುನಿಕ ಬೇಸಾಯ ಪದ್ಧತಿಯಲ್ಲಿ ಸಾವಯವ ಕೃಷಿಗೆ ಇತ್ತೀಚೆಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಪ್ರಾಣಿಗಳ ಮಲಮೂತ್ರ, ತರಕಾರಿ ಸಸ್ಯಗಳ ತ್ಯಾಜ್ಯ ಮೊದಲಾದ ವಸ್ತುಗಳನ್ನು ಅದಕ್ಕಾಗಿಯೇ ಸಿದ್ಧಪಡಿಸಿದ ತೊಟ್ಟಿಗಳಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಿ, ಯಾವುದೇ ಬಗೆಯ ರಾಸಾಯನಿಕ ಪದಾರ್ಥಗಳನ್ನು ಸೇರಿಸದೆ ನೈಸರ್ಗಿಕವಾಗಿ ಕೊಳೆತ ಗೊಬ್ಬರ ತಯಾರಿಸುವುದು. ಆಮೇಲೆ ಅದನ್ನು ಶುದ್ಧಿಗೊಳಿಸಿ ಬೆಳೆಗಳಿಗೆ ನೇರವಾಗಿ ನೀಡುವುದು.ಇಂತಹ ಗೊಬ್ಬರವನ್ನು ವ್ಯವಸಾಯದಲ್ಲಿ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ನೀರನ್ನು ಹೆಚ್ಚುಕಾಲ ಹಿಡಿದಿಟ್ಟುಕೊಳ್ಳವ ಸಾಮರ್ಥ್ಯ ಹೆಚ್ಚುತ್ತದೆ. ಅಲ್ಲದೇ ಸಾಮಾನ್ಯ ಕೀಟಬಾಧೆಗಳಿಗೆ ಬೆಳೆ ಬೇಗ ಹಾನಿಯಾಗುವುದಿಲ್ಲ. ಕೀಟ ಬಾಧೆಗಳಿಗೆ ಸಾವಯವ ಪದ್ಧತಿಯಲ್ಲಿ ಬೇವಿನ ಹಿಂಡಿ, ಹೊಂಗೆ ಹಿಂಡಿ ಮೊದಲಾದ ಔಷಧೋಪಚಾರಗಳಿವೆ. ಇವು ರೋಗಗಳನ್ನು ನಿವಾರಿಸುವುದಲ್ಲದೇ, ಅಲ್ಲಿ ಉತ್ಪನ್ನವಾದ ತರಕಾರಿ, ಹಣ್ಣು, ಬೆಳೆಗಳನ್ನು ಸೇವಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗುವುದಿಲ್ಲ.
ಉಪಸಂಹಾರ:- ಒಟ್ಟಿನಲ್ಲಿ ಸಾವಯವ ಕೃಷಿ ಪದ್ಧತಿಯು ಇಂದಿನ ಆಧುನಿಕ ಯುಗದಲ್ಲಿ ಹೆಚ್ಚು ಉಪಯೋಗಕಾರಿಯಾದುದು. ಬೆಳೆಗಳಿಗೆ ಆಧುನಿಕ ರಾಸಾಯನಿಕ ಔಷಧಗಳ ಬಳಕೆಯನ್ನು ಕಡಿಮೆ ಮಾಡಿ, ಅದರಿಂದುAಟಾಗುವ ದುಷ್ಪರಿಣಾಮಗಳನ್ನು ತಡೆಯಬಹುದು. ಹಾಗಾಗಿ ಇಂದಿನ ದಿನಗಳಲ್ಲಿ ಸಾವಯವ ಕೃಷಿ ಪದ್ಧತಿ, ರೈತಮಿತ್ರ ಪದ್ಧತಿ ಮತ್ತು ಪರಿಸರ ಸ್ನೇಹಿ ಕೃಷಿ ಪದ್ದತಿ ಎನ್ನಿಸಿದೆ.