ನಿರುದ್ಯೋಗ
ಪೀಠಿಕೆ:- ನಮ್ಮ ದೇಶದಲ್ಲಿರುವ ಅನೇಕ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆಯು ಒಂದು. ಉದ್ಯೋಗ ಮಾಡಲು /ಶ್ರಮಪಡಲು ತಯಾರಾಗಿರುವ ಜನತೆಗೆ ಮಾಡಲು ಉದ್ಯೋಗ ಇಲ್ಲದೆ ಇರುವುದೇ ನಿರುದ್ಯೋಗ. ಕಾಯಕವೇ ಕೈಲಾಸ, ದುಡಿಯುವ ಕೈಗಳಿಗೆ ಸೂಕ್ತ ಕೆಲಸವನ್ನು ಒದಗಿಸದಿದ್ದರೆ ಅದು ಮಾನವ ಶಕ್ತಿಯ ಅಪಾರ ನಷ್ಟ. ಮಾನವ ಸಂಪತ್ತು ಒಂದು ದೇಶದ ಸಂಪತ್ತು.
ವಿಷಯ ನಿರೂಪಣೆ:- ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಅಲೆಯುವವರ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ವಿಶ್ವ ವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕೂಡಾ ಉದ್ಯೋಗಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ನಿರುದ್ಯೋಗ ಸಮಸ್ಯೆಗೆ ಮುಖ್ಯವಾದ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕೆಲಸ ಕಾರ್ಯಗಳಲ್ಲಿ ಯಂತ್ರೋಪಕರಣಗಳ ಬಳಕೆ. ನಿರುದ್ಯೋಗ ಸಮಸ್ಯೆಯಿಂದ ಯುವ ಜನರು ಹಾದಿ ತಪ್ಪುತ್ತಾರೆ. ಸೋಮಾರಿಗಳಾಗುತ್ತಾರೆ. ದುಶ್ಚಟಗಳಿಗೆ ದಾಸರಾಗುತ್ತಾರೆ. ಹಣ ಸಂಪಾದನೆಗಾಗಿ ಕಳ್ಳತನ, ಕೊಲೆ, ಸುಲಿಗೆ, ದರೋಡೆ ಮೊದಲಾದ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗುತ್ತಾರೆ. ಹೀಗೆ ಯುವಜನತೆ ಹಾದಿ ತಪ್ಪುವುದರಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ದೇಶದ ಪ್ರಗತಿ ಕುಂಠಿತವಾಗುತ್ತದೆ. ಬಡತನ ತಾಂಡವವಾಡುತ್ತದೆ. ಯುವಜನರು ನಕ್ಸಲಿಸಂ, ಭಯೋತ್ಪಾದನೆ ಸಂಘಟನೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಆದ್ದರಿಂದ ಯಾವುದೇ ದೇಶದ ಸರ್ಕಾರ ಮತ್ತು ಅಲ್ಲಿನ ಜನತೆ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವತ್ತ ತೀವ್ರವಾಗಿ ಗಮನಹರಿಸಬೇಕು. ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ಕೊಟ್ಟು ಅಭಿವೃದ್ದಿ ಹೊಂದಲು ಅವಕಾಶ ಮಾಡಿಕೊಡಬೇಕು. ವಿದ್ಯಾಭ್ಯಾಸ ಕ್ರಮವನ್ನು ಬದಲಾಯಿಸಬೇಕು. ಶಾಲಾ ಹಂತದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಒದಗಿಸಬೇಕು. ಯುವಜನರು ಸ್ವಯಂ ಉದ್ಯೋಗ ಮಾಡಲು ಉಚಿತ ಸ್ಥಳಾವಕಾಶ, ಸಾಲಸೌಲಭ್ಯ, ತೆರಿಗೆ ರಿಯಾಯಿತಿ, ಸೂಕ್ತ ಮಾರುಕಟ್ಟೆ ಸೃಷ್ಟಿಸುವ ಕಾರ್ಯವನ್ನು ಸರ್ಕಾರ ಮಾಡಿಕೊಡಬೇಕು. ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಮಾಡುವುದರ ಮುಖಾಂತರ ಪಟ್ಟಣಕ್ಕೆ ಉದ್ಯೋಗಕ್ಕಾಗಿ ವಲಸೆ ಬರುವುದನ್ನು ತಡೆಗಟ್ಟಬೇಕು. ಸರ್ಕಾರದಲ್ಲಿರುವ ಲಂಚಕೋರತನ, ಭ್ರsÀಷ್ಟಾಚಾರ ನಿರ್ಮೂಲನೆ ಮಾಡಬೇಕು.
ಉಪಸಂಹಾರ:- ಸರ್ಕಾರವು ಜನತೆಯ e್ಞÁನದ ಮಟ್ಟ, ವಿದ್ಯಾರ್ಹತೆ, ಅನುಭವಕ್ಕೆ ತಕ್ಕ ಉದ್ಯೋಗಗಳನ್ನು ಒದಗಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟಾಗ ಜನತೆ ಸಂತೋಷದಿAದ ಪ್ರಾಮಾಣಿಕರಾಗಿ ತಮ್ಮ ಉದ್ಯೋಗದಲ್ಲಿ ಪ್ರಗತಿ ಸಾಧಿಸುತ್ತಾರೆ. ಆಗ ರಾಷ್ಟçವೂ ತಾನೇ ತಾನಾಗಿ ಈ ಸಮಸ್ಯೆಗಳಿಂದ ಬಿಡುಗಡೆಗೊಂಡು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.