ರಾಷ್ಟ್ರೀಯ ಹಬ್ಬಗಳ ಮಹತ್ವ್ವ
ಪೀಠಿಕೆ:- ಒಂದು ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟಿçÃಯ ಹಬ್ಬಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಭಾರತದಂತಹ ವಿವಿಧತೆಯುಳ್ಳ ರಾಷ್ಟçಗಳಲ್ಲಿ ಏಕತೆಯನ್ನು ತರುವುದು ಇಂತಹ ರಾಷ್ಟಿçÃಯ ಹಬ್ಬಗಳ ಮೂಲಕ ಸಾಧ್ಯವಿದೆ. ಇಡಿ ರಾಷ್ಟçದ ಜನರೆಲ್ಲರೂ ಯಾವುದೇ ಭೇಧಭಾವವಿಲ್ಲದೆ, ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆಯನ್ನು ತೊರೆದು ಒಟ್ಟಾಗಿ ಆಚರಿಸುವ ಹಬ್ಬಗಳೇ ರಾಷ್ಟಿçÃಯ ಹಬ್ಬಗಳು. ನಮ್ಮದೇಶದಲ್ಲಿ ಮೂರು ರಾಷ್ಟಿçÃಯ ಹಬ್ಬಗಳೆಂದು ಘೋಸಿಸಲಾಗಿದೆ. ಅವುಗಳೆಂದರೆ ೧) ಸ್ವಾತಂತ್ರö್ಯ ದಿನಾಚರಣೆ ೨) ಗಣರಾಜ್ಯೋತ್ಸವ ೩) ಗಾಂಧಿ ಜಯಂತಿ.
ವಿಷಯ ನಿರೂಪಣೆ:- ೧) ಸ್ವಾತಂತ್ರö್ಯ ದಿನಾಚರಣೆ:- ಭಾರತ ಸುಮಾರು ಎರಡು ನೂರು ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟಿಷರು ಭಾರತೀಯ ಅರಸರ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಭಾರತೀಯರಿಗೆ ಸ್ವಾತಂತ್ರ÷್ಯ ಎನ್ನುವುದೇ ಇರಲಿಲ್ಲ. ಹಾಗಾಗಿ ಭಾರತೀಯರೆಲ್ಲರೂ ಒಟ್ಟಾಗಿ ಬ್ರಿಟಿಷರ ವಿರುದ್ಧ ಸ್ವಾತಂತ್ರö್ಯ ಹೋರಾಟದ ರಣಕಹಳೆಯನ್ನು ಊದಿ ಕೊನೆಗೆ ಸಾ.ಶ.೧೯೪೭ನೇ ಆಗಸï್ಟ ೧೫ ರಂದು ಸ್ವಾತಂತ್ರ÷್ಯವನ್ನು ಪಡೆದರು. ಆ ದಿನವನ್ನು ಪ್ರತಿ ವರ್ಷ ಭಾರತೀಯರೆಲ್ಲರೂ ಒಟ್ಟಾಗಿ ರಾಷ್ಟಿçÃಯ ಹಬ್ಬವನ್ನಾಗಿ ಆಚರಿಸಿ ರಾಷ್ಟಿçÃಯ ಏಕತೆಯನ್ನು ಮೆರೆಯುತ್ತಾರೆ. ಅಂದು ಶಾಲೆ, ಕಾಲೇಜು, ಕಛೇರಿಗಳಲ್ಲಿ ರಾಷ್ಟಿçÃಯ ಧ್ವಜವನ್ನು ಹಾರಿಸಿ ದೇಶಭಕ್ತಿ ಸಾರುವ ಕರ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ.
೨) ಗಣರಾಜ್ಯೋತ್ಸವ: ಭಾರತದೇಶವು ಸ್ವಾತಂತ್ರö್ಯವನ್ನು ಪಡೆದ ನಂತರ ಆಡಳಿತದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಆ ರೂಪುರೇಷೆÀಗಳನ್ನು ಒಳಗೊಂಡಿರುವುದೇ ನಮ್ಮ ಸಂವಿಧಾನ. ಎಲ್ಲ ರಾಜ್ಯಗಳನ್ನು ಗಣಗಳನ್ನಾಗಿ ಮಾಡಿ (ಒಟ್ಟುಗೂಡಿಸಿ) ಉತ್ತಮವಾದ ಆಡಳಿತ ನಡೆಸಲು ಕಾನೂನು ರೂಪ ಪಡೆದ ಸಂವಿಧಾನವನ್ನು ಜನವರಿ ೨೬, ೧೯೫೦ ರಂದು ಜಾರಿಗೆ ತರಲಾಯಿತು. ಆ ದಿನವೇ ಗಣರಾಜ್ಯ ದಿನ. ಇದನ್ನು ಕೂಡ ನಮ್ಮ ದೇಶದ ಪ್ರಜೆಗಳೆಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಾರೆ. ಈ ದಿನದಲ್ಲಿ ರಾಷ್ಟçಧ್ವಜವನ್ನು ಹಾರಿಸಿ ಸಂವಿಧಾನದ ನಿರ್ಮಾತೃಗಳು ಹಾಗೂ ತತ್ತ÷್ವ್ವಗಳನ್ನು ಸ್ಮರಿಸಿಕೊಳ್ಳತ್ತಾರೆ. ಪ್ರತಿಯೊಬ್ಬರು ಸಂವಿಧಾನ ಪಾಲಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳುವ ಆಶಯನ್ನು ಸ್ಮರಿಸುತ್ತಾರೆ. ಹಾಗೆಯೇ ದೇಶಭಕ್ತಿ ಸಾರುವ ಕಾರ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ.
೩) ಗಾಂಧಿ ಜಯಂತಿ: ಯಾವುದೇ ಒಂದು ದೇಶದ ಜನರೆಲ್ಲರೂ ಒಟ್ಟಾಗಿ ಸೇರಲು ನಾಯಕತ್ವ ಬೇಕು. “ನಾಯಕರಿಲ್ಲದ ನಾವೆ ದಡ ಸೇರಲಾರದು” ಅಂತೆಯೇ ನಮ್ಮ ದೇಶದ ಸ್ವಾತಂತ್ರö್ಯ ಪಡೆಯಲು ನಾಯಕತ್ವ ವಹಿಸಿಕೊಂಡವರು ನಮ್ಮ ದೇಶದ ರಾಷ್ಟçಪಿತ ಎನಿಸಿಕೊಂಡ ಮಹಾತ್ಮ ಗಾಂಧೀಜಿಯವರು. ಅವರು ಹುಟ್ಟಿದ ದಿನವೇ ಅಕ್ಟೋಬರ್ ೨. ಆ ದಿನವನ್ನು ಗಾಂಧಿಜಯAತಿಯೆAದು ರಾಷ್ಟಿçÃಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ಗಾಂಧೀಜಿಯವರು ಸ್ವಾತಂತ್ರö್ಯ ಚಳವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಸ್ವಾತಂತ್ರö್ಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದ್ದರಿಂದ ಅವರ ಆದರ್ಶಗಳನ್ನು ನೆನೆಯುವ ದಿನವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಉಪಸಂಹಾರ:- ಭಾರತದಲ್ಲಿ ರಾಷ್ಟಿçÃಯ ಹಬ್ಬಗಳನ್ನು ಆಚರಿಸುವುದರಿಂದ ಪ್ರತಿಯೊಬ್ಬ ನಾಗರಿಕರಲ್ಲಿ ಏಕತೆ, ದೇಶಭಕ್ತಿ, ಸಂವಿಧಾನದ ಮಹತ್ವ, ನಾಯಕತ್ವದ ಗುಣ ಮುಂತಾದ ವಿಚಾರಗಳನ್ನು ತಿಳಿಯಲು ಮತ್ತು ನಾವು ಅದೇ ರೀತಿ ನಡೆದುಕೊಳ್ಳಲು ನೆರವಾಗುತ್ತದೆ.