ಎದೆಗೆ ಬಿದ್ದ ಅಕ್ಷರ
10ನೆಯ ತರಗತಿ ಕನ್ನಡ ನೋಟ್ಸ್
ಆ ] ಒಂದು ವಾಕ್ಯದಲ್ಲಿ ಉತ್ತರಿಸಿ .
1. ಮನೆಮಂಚಮ್ಮನ ಕತೆ ಹೇಳಿದ ಕವಿ ಯಾರು ?
ಮನೆಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ
2. ‘ ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಯಾರು ?
‘ ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಹಳಕಟ್ಟಿಯವರು ,
3. ಇಂದಲ್ಲ – ನಾಳೆ ಫಲ ಕೊಡುವ ಅಂಶಗಳು ಯಾವುವು ?
‘ ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ‘ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ .
4. ಮನೆ ಮಂಚಮ್ಮ ಯಾರು ?
ಕವಿ ಸಿದ್ಧಲಿಂಗಯ್ಯ ಅವರು ದೇವನೂರು ಮಹಾದೇವ ಅವರಿಗೆ ಹೇಳಿದ ಕತೆಯಲ್ಲಿನ ಗ್ರಾಮದೇವತೆ ಮನೆ ಮಂಚಮ್ಮ .
5. ವಚನಕಾರರಿಗೆ ಯಾವುದು ದೇವರಾಗಿತ್ತು ?
ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು .
6. ಅಶೋಕ ಪೈ ಅವರ ವೃತ್ತಿಯಾವುದು ?
ಅಶೋಕ ಪೈ ಅವರು ಮನೋವೈದ್ಯರು .
7. ದೇವನೂರರ ‘ ನನ್ನ ದೇವರು ‘ ಯಾರೆಂಬುದನ್ನು ಸ್ಪಷ್ಟಿಕರಿಸಿ ,
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದು ದೇವನೂರು ಮಹಾದೇವ ಅವರ ದೇವರಾಗುತ್ತದೆ .
ಆ ] ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1 , ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವೇನು ?
ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿರುವಾಗ , ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆ ಆಡುತ್ತ ತಮ್ಮಷ್ಟಕ್ಕೆ ತಾವು ಇರುವಾಗ , ಟೆಲಿವಿಷನ್ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ . ಅದೇ ಟೆಲಿವಿಷನ್ನಲ್ಲಿ ಯಾವುದಾರೊಂದು ನೃತ್ಯದೃಶ್ಯ ಬಂದಾಗ ಅದನ್ನು ನೋಡುತ್ತಿರುವವರ ಮಿಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದೆ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸ್ವಲ್ಪಮಟ್ಟಿಗೆ ಸಂತೋಷದ ಭಾವನೆ ಉಂಟಾಗುತ್ತದೆ . ಇದು ಆಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯ .
2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು ? ವಿವರಿಸಿ ,
ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ , ಜ್ಞಾನ ಮಾತ್ರ ಅಲ್ಲ ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು , ಅದು ಕೇಳಿ ತಿಳಿದಿದ್ದಲ್ಲ . ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ , ಅದು ತರ್ಕವಲ್ಲ . ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು , ‘ ಅಂದರೆ ಜ್ಞಾನ – ನಡೆ – ನುಡಿ – ಕ್ರಿಯೆಯಿಂದ ಏಕರೂಪವಾಗಿ ಒಡಮೂಡಿದ ತಿಳಿವಳಿಕೆಯೇ ಅರಿವು ‘ ಎಂಬುದು ಅವರ ಅಭಿಮತ .
ಇ ] ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯನ್ನು ಬರೆಯಿರಿ ,
ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯೆಂದರೆ- ಭೂಮಿಗೆ ಬಿದ್ದ ಬೀಜ , ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು ಎಂಬ ನೀತಿಯನ್ನು ಹೇಳುವ ಕಾರುಣ್ಯ ಸಮತೆಯ ಕತೆಯನ್ನು ಹೇಳಿದ್ದಾರೆ . ಅದೆಂದರೆ ಒಮ್ಮೆ ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ . ಗುಡಿಯ ಕಟ್ಟಡ ಚಾವಣಿಯವರೆಗೂ ಮೇಲೇಳುತ್ತದೆ . ಆಗ ಇದ್ದಕ್ಕಿದ್ದಂತೆಯೇ ಮಂಚಮ್ಮದೇವಿ ಭಕ್ತನೊಬ್ಬನ ಮೇಲೆ ಆವಾಹನೆಯಾಗಿ “ ಏನ್ ಮಾಡ್ತಾ ಇದ್ದೀರಿ ? ” ಎಂದು ಕೇಳುತ್ತಾಳೆ . “ ನಿನಗೊಂದು ಗುಡಿಕಡ್ತಾ ಇದ್ದೀವಿ , ತಾಯಿ ” ಎಂದು ಹೇಳಿದಾಗ ‘ ನಿಮಗೆಲ್ಲಾ ಮನೆ ಉಂಟಾ ? ‘ ಎಂದು ಕೇಳುತ್ತಾಳೆ . ಅದಕ್ಕೆ ಉತ್ತರವಾಗಿ ಅಲ್ಲೊಬ್ಬ “ ನನಗಿಲ್ಲತಾಯಿ ‘ ಎಂದು ಹೇಳುತ್ತಾನೆ . ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಬೇಡ ಎಂದು ಮಂಚಮೃತಾಯಿ ಹೇಳುತ್ತಾಳೆ . ಅಂದಿನಿಂದ ಮಂಚಮ್ಮ ‘ ಮನೆ ಮಂಚಮ್ಮ ‘ ಎಂದೇ ಪ್ರಸಿದ್ಧಳಾದ ತಾಯಿ ಚಾವಣಿ ಇಲ್ಲದ ಗುಡಿಯಲ್ಲಿ ಪೂಜಿತಳಾಗಿ ಎಲ್ಲರನ್ನೂ ಅನುಗ್ರಹಿಸುತ್ತಿದ್ದಾಳೆ .
ಈ ] ಸಂದರ್ಭದೊಂದಿಗೆ ಸ್ವಾರಸ್ಯ ಬರೆಯಿರಿ ,
1. “ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ . ”
ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ .
ಸಂದರ್ಭ : – ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಜನ ಪ್ರಾರಂಭಿಸಿದಾಗ , ಒಬ್ಬನ ಮೈ ಮೇಲೆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು ಬಂದು ಜನರೊಡನೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಗ್ರಾಮದೇವತೆ ಮಂಚಮ್ಮ ಜನರಿಗೆ ಹೇಳುತ್ತಾಳೆ .
ಸ್ವಾರಸ್ಯ : – ತನ್ನ ಭಕ್ತರಿಗೆ ಮನೆ ಇಲ್ಲದ ಮೇಲೆ ನನಗೂ ಮನೆ ಬೇಡ ಎಂಬ ಮಂಚಮೃದೇವತೆಯ ಮಾತು , ಕಾರುಣ್ಯ ಮತ್ತು ಸಮಾನತೆಯ ದ್ಯೋತಕವಾಗಿರುವುದು ಈ ಮಾತಿನ ಸ್ವಾರಸ್ಯವಾಗಿದೆ .
2. “ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ . ”
ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ .
ಸಂದರ್ಭ : – ಲೇಖಕರಾದ ದೇವನೂರು ಮಹಾದೇವ ಅವರು ಡಾ . ಆಶೋಕ ಪೈ ಅವರ ಒಂದು ಸಂಶೋಧನಾ ಸತ್ಯಕತೆಯನ್ನು ಉದಾಹರಣೆ ನೀಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .
ಸ್ವಾರಸ್ಯ : – “ ಯಾವುದೇ ಒಂದು ಜೀವಿಗೆ ಆಗುವ ದುಃಖ – ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ , ಎಲ್ಲಾ ಜೀವಿಗಳಲ್ಲೂ ಕಂಪನ ಉಂಟುಮಾಡುತ್ತಿರುತ್ತದೆ ” ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .
3. “ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು ”
ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ .
ಸಂದರ್ಭ : ಲೇಖಕರು ವಚನಕಾರರ ಪ್ರಕಾರ ದೇವರೆಂದರೆ ಏನು ಎಂದು ಹೇಳುವ ಸಂದರ್ಭದಲ್ಲಿ , ‘ ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ . ಪ್ರತಿಯೊಬ್ಬ ವಚನಕಾರರಿಗೂ ಅವರವರದೇ ಇಷ್ಟದೈವ . ಅಂದರೆ ಅವರಿಗೆ ಅವರವರ ಪ್ರಶ್ನೆಯೇ ದೇವರಾಗಿತ್ತು . ‘ ಎಂದು ಹೇಳಿದ್ದಾರೆ
ಸ್ವಾರಸ್ಯ : ಪ್ರಜ್ಞೆಯ ಮುಂದೆ ಸುಳ್ಳು ಹೇಳಲು ಸಾಧ್ಯವಿಲ್ಲ . ಆದ್ದರಿಂದ ವಚನಕಾರರು ಬೆಂಕಿಯಂತಹ ಪ್ರಜ್ಞೆಯನ್ನೇ ಪ್ರಮಾಣವಾಗಿಸಿಕೊಂಡು ಸತ್ಯಕ್ಕೆ ಆದ್ಯತೆ ನೀಡಿದರು ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
4. “ ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ . ”
ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ .
ಸಂದರ್ಭ : – ಲೇಖಕರಾದ ದೇವನೂರು ಮಹಾದೇವ ಅವರು “ ಕೊಲೆ , ಸುಲಿಗೆ , ದ್ವೇಷ , ಅಸೂಯೆಗಳಿಂದ ಶೋಭೆಗೊಂಡು ನರಳುತ್ತಿರುವ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನು ಘಾಸಿಗೊಳಿಸುತ್ತಿದೆ ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .
ಸ್ವಾರಸ್ಯ : ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುವುದರಿಂದ ಕಾರುಣ್ಯ ಹಾಗೂ ಸರ್ವಸಮಾನತೆ ಮನೋಭಾವ ಮೂಡಿಸಿಕೊಂಡು ಬದುಕಬೇಕು ಎಂಬುದು ಈ ಮಾತಿನಲ್ಲಿ ಸ್ವಾರಸ್ವಪೂರ್ಣವಾಗಿ ಅಭಿವ್ಯಕ್ತಗೊಂಡಿದೆ .