ಹತ್ತನೆಯ ತರಗತಿ ಫಲಿತಾಂಶ ಉತ್ತಮೀಕರಣ ಚಟುವಟಿಕೆ – ಪರೀಕ್ಷಾ ಸಪ್ತಾಹ . 2025-26
ಸಾಪ್ತಾಹಿಕ ಪರೀಕ್ಷೆ – 2 ( ಜೂನ್ 2015 ) ಅಂಕಗಳು : 25
ಕೆಳಕಂಡ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ. 10 x 1=10
1.‘ಅಬ್ಧಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ. [2015RR]
ಎ) ಶ್ಚುತ್ವ ಸಂಧಿ ಬಿ) ಜಶ್ತ್ವ ಸಂಧಿ ಸಿ) ವೃದ್ಧಿ ಸಂಧಿ ಡಿ) ಅನುನಾಸಿಕ ಸಂಧಿ
2.‘ಅಂಶಿಸಮಾಸ’ಕ್ಕೆ ಸೂಕ್ತ ಉದಾಹರಣೆ ಇದಾಗಿದೆ. [2015RR]
ಎ) ಇಮ್ಮಾವು ಬಿ) ಮುಕ್ಕಣ್ಣ ಸಿ) ಕಡೆಗಣ್ಣು ಡಿ) ಕಣ್ದೆರೆ
3.‘ಪಾರಿಭಾಷಿಕ ಪದಗಳನ್ನು ಬಳಸುವಾಗ,ಅನ್ಯಭಾಷೆಯ ಪದಗಳನ್ನು ಬಳಸುವಾಗ’ ಈ ಚಿಹ್ನೆಯನ್ನು ಬಳಸಲಾಗುವುದು. [2015RR]
ಎ) ಉದ್ಧರಣ ಚಿಹ್ನೆ ಬಿ) ವಿವರಣಾತ್ಮಕ ಚಿಹ್ನೆ ಸಿ) ಆವರಣ ಚಿಹ್ನೆ ಡಿ) ವಾಕ್ಯವೇಷ್ಟನ ಚಿಹ್ನೆ
4 ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅಂಥ ವಾಕ್ಯಗಳನ್ನುಹೀಗೆ ಕರೆಯುತ್ತೆವೆ. [2015RR]
ಎ)ಮಿಶ್ರವಾಕ್ಯ ಬಿ) ಸಂಯೋಜಿತ ವಾಕ್ಯ ಸಿ) ಸಾಮಾನ್ಯ ವಾಕ್ಯ ಡಿ) ಅರ್ಥಪೂರ್ಣವಾಕ್ಯ
5.‘ಸೊಗಸಾಗಿ’ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ [2015RR]
ಎ)ಅನುಕರಣಾವ್ಯಯ ಬಿ) ಸಾಮಾನ್ಯಾವ್ಯಯ ಸಿ) ಭಾವಸೂಚಕಾವ್ಯಯ ಡಿ) ಸಂಬಂಧಾರ್ಥಕಾವ್ಯಯ
6.ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಭಿಪ್ರಾಯದ ವಾಕ್ಯವಾಗಿದ್ದರೆಅದು _ [2015RF ]
ಎ) ಸಂಯೋಜಿತ ವಾಕ್ಯ ಬಿ) ಸಾಮಾನ್ಯ ವಾಕ್ಯ ಸಿ) ಮಿಶ್ರವಾಕ್ಯ ಡಿ) ಪ್ರಶ್ನಾರ್ಥಕ ವಾಕ್ಯ
7.‘ಪೂಜಾರಿ’ ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ [2015RR]
ಎ) ರೂಢನಾಮ ಬಿ) ಅನ್ವರ್ಥನಾಮ ಸಿ)ಅಂಕಿತನಾಮ ಡಿ)ಭಾವನಾಮ
8.ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅದನ್ನುಹೀಗೆನ್ನುವರು
ಎ) ಛೇಕಾನುಪ್ರಾಸ ಬಿ) ಯಮಕ ಸಿ) ವೃತ್ಯನುಪ್ರಾಸ ಡಿ) ಚಿತ್ರಕವಿತ್ವ [2015RR]
9 .ಗುರುಲಘು ಕೊನೆಯಲ್ಲಿ ಬರಲು ಈ ಗಣಗಳಿರುತ್ತವೆ [2015RR]
ಎ) ಮನ ಗಣ ಬಿ) ಭಯ ಗಣ ಸಿ) ಜರ ಗಣ ಡಿ) ಸತ ಗಣ
10 . ‘ಸೇರೀತು’ಪದವು ಈ ಕ್ರಿಯಾರೂಪಕ್ಕೆ ಸೇರಿದುದಾಗಿದೆ [2015RR]
ಎ) ವಿಧ್ಯರ್ಥಕ ಬಿ) ಸಂಭಾವನಾರ್ಥಕ ಸಿ) ನಿಷೇಧಾರ್ಥಕ ಡಿ) ಸಾಮಾನ್ಯಾರ್ಥಕ
ಕೆಳಕಂಡ ಪ್ರಶ್ನೆಗಳಿಗೆ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ. 4 x 1=4
11.ಬಟ್ಟೆಬರೆ : ಜೋಡಿನುಡಿ : : ಕಟ್ಟಕಡೆಗೆ : _______ [2015RR]
12 .ಯಜ್ಞ : ಜನ್ನ : : ಕಾರ್ಯ : _____ [2015RR]
13.ಶ್ರಮಣಿ : ತಪಸ್ವಿನಿ : : ಮಧುಕರ : _______ [2015RR]
14. ಭೀಮನಂತೆ : ತದ್ಧಿತಾಂತಾವ್ಯಯ : : ಚೆಲುವಿಕೆ : __________ [2015RR]
15 ಕೆಳಕಂಡ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿ. 1 x 3 =3
. ಸತಿಪತಿಗಳೊಂದಾಗದ ಭಕ್ತಿಅಮೃತದೊಳು ವಿಷ ಬೆರೆಸಿದಂತೆ . [2015RR]
ಅಥವಾ
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು . [2015RR]
16 ಕೆಳಕಂಡ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗಿಸಿ, ಛಂದಸ್ಸಿನ ಹೆಸರನ್ನು ಬರೆಯಿರಿ. . 1 x 3=3
ಎಡದ ಮೈಯಲಿ ಕೌರವೇಂದ್ರರ
ಗಡಣ ಬಲದಲಿ ಪಾಂಡು ತನಯರ
ಗಡಣವಿದುರಲಿ ಮಾದ್ರ ಮಾಗದ ಯಾದವಾದಿಗಳು [2015RR]
ಅಥವಾ
ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ
ತೊತ್ತಳದುಳಿದುದು ವಾಲ್ಮೀಕಿಮುನಿನಾಥನೇ
ಪೊತ್ತುಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ [2015RR]
ಕೆಳಕಂಡ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರ ಬರೆಯಿರಿ. 1 x 5=5