ಜನಸಂಖ್ಯೆ
ಪೀಠಿಕೆ:- ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಜನರ ಒಟ್ಟು ಸಂಖ್ಯೆಯನ್ನು ಆ ಪ್ರದೇಶದ ‘ಜನಸಂಖ್ಯೆ’ ಎಂದು ಗುರುತಿಸಲಾಗುತ್ತದೆ. ಜನಸಂಖ್ಯೆಯು ಒಂದು ದೇಶದ ಮಾನವ ಸಂಪತ್ತು. ಆದರೆ ಯಾವುದೇ ರಾಷ್ಟçದಲ್ಲಿ ಜನಸಂಖ್ಯೆಯು ಮಿತಿಮೀರಿ ಬೆಳೆದರೆ ಅದು ರಾಷ್ಟçದ ಉನ್ನತಿಗೆ ಸಂಚಕಾರವಾಗಿ ಜ್ವಲಂತ ಸಮಸ್ಯೆಯಾಗುತ್ತದೆ.
ವಿಷಯ ನಿರೂಪಣೆ:- ಜನಸಂಖ್ಯಾಸ್ಫೋಟಕ್ಕೆ ಹಲವಾರು ಕಾರಣಗಳಿವೆ. ಭೌಗೋಳಿಕ ಲಕ್ಷಣ, ವಾಯುಗುಣ, ಅನಕ್ಷರತೆ, ಅಂಧಶ್ರದ್ದೆ, ಬಹುಪತ್ನಿತ್ವ, ಬಾಲ್ಯ ವಿವಾಹ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಇತ್ಯಾದಿ ಕಾರಣಗಳಿಂದ ಜನಸಂಖ್ಯೆಯು ಹೆಚ್ಚಾಗುತ್ತದೆ. ಜನಸಂಖ್ಯೆ ಹೆಚ್ಚಿದಂತೆ ಅವಶ್ಯಕತೆಗಳೂ ಹೆಚ್ಚುತ್ತವೆ. ಜೊತೆಗೆ ಸಮಸ್ಯೆಗಳು ಉದ್ಭವಿಸುತ್ತವೆ. ಆಹಾರ, ವಿದ್ಯಾಭ್ಯಾಸ, ಉದ್ಯೋಗ, ವಸತಿ, ನೀರು ಮೊದಲಾದ ಮೂಲಭೂತ ಅವಶ್ಯಕತೆಗಳಿಗಾಗಿ ಸ್ಪರ್ಧೆ ಏರ್ಪಡುತ್ತವೆ. ನಮ್ಮ ದೇಶ ವಿಸ್ತಾರದಲ್ಲಿ ಅಧಿಕವಾಗಿದ್ದರೂ ಇಲ್ಲಿನ ನಿಸರ್ಗ ಸಂಪತ್ತಿಗೆ ಒಂದು ಮಿತಿಯಿದೆ. ಆಹಾರ ಬೆಳೆಯುವ ಭೂಮಿ, ಕುಡಿಯುವ ನೀರು, ಮನೆ ಕಟ್ಟಿಕೊಳ್ಳಲು ಯೋಗ್ಯವಾದ ಬಯಲು - ಇವುಗಳು ಜನಸಂಖ್ಯೆ ಹೆಚ್ಚಿದಂತೆ ಹೆಚ್ಚುತ್ತಾ ಹೋಗುವುದಿಲ್ಲ. ಮಿತಿ ಮೀರಿದ ಜನಸಂಖ್ಯೆಯಿAದ ಮಕ್ಕಳಲ್ಲಿ ಪೌಷ್ಠಿಕ ಆಹಾರದ ಕೊರತೆ, ರೋಗರುಜಿನಗಳು ಹೆಚ್ಚಾಗಿ ಸಮಾಜದ ಆರೋಗ್ಯ ಹಾಳಾಗುತ್ತದೆ. ಮಿತಿ ಮೀರಿದ ಜನಸಂಖ್ಯೆಯಿAದ ದೇಶದಲ್ಲಿ ಅಶಾಂತಿ, ಕಳ್ಳತನ, ಕೊಲೆ ಸುಲಿಗೆ, ದರೋಡೆ, ಮಾದಕ ವಸ್ತುಗಳ ಚಟ ಇತ್ಯಾದಿ ಸಾಮಾಜಿಕ ಪಿಡುಗುಗಳು ಸಹ ಹೆಚ್ಚಾಗುತ್ತವೆ. ಭಾರತದಲ್ಲಿ ಸ್ವಾತಂತ್ರö್ಯ ಪೂರ್ವದಲ್ಲಿ ಮೂವತ್ತು ಕೋಟಿ ಇದ್ದ ಜನಸಂಖ್ಯೆ ಸ್ವಾತಂತ್ರಾö್ಯನAತರ ವೇಗವಾಗಿ ಬೆಳೆಯುತ್ತಿದೆ. ವಿಶ್ವದ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನವಿದ್ದರೆ, ಎರಡನೆಯ ಸ್ಥಾನದಲ್ಲಿರುವುದು ಚೀನಾ. ಭಾರತದ ಜನಸಂಖ್ಯೆ ಶತಕೋಟಿಯನ್ನು ಮೀರಿ ಬೆಳೆದಿದೆ. ಈ ರೀತಿ ಹೆಚ್ಚುತ್ತಿರುವ ಜನಸಂಖ್ಯೆ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಇದೆ. ಆದ್ದರಿಂದ ಜನಸಂಖ್ಯೆಯನ್ನು ನಿಯಂತ್ರಿಸುವುದು ಇಂದಿನ ಅಗತ್ಯವಾಗಿದೆ. ‘ಒಂದು ಮನೆಗೆ ಒಂದೇ ಮಗು’ ಎಂಬ ಕುಟುಂಬ ಕಲ್ಯಾಣ ಯೋಜನೆ, ಬಾಲ್ಯವಿವಾಹ ನಡೆಯದಂತೆ ತಡೆಗಟ್ಟುವುದು, ಜನಜಾಗೃತಿ ಮೂಡಿಸುವುದು ಮೊದಲಾದ ಕಾರ್ಯಕ್ರಮಗಳಿಂದ ಜನಸಂಖ್ಯೆಯನ್ನು ನಿಯಂತ್ರಿಸಬೇಕು.
ಉಪಸಂಹಾರ:- ಜನಸಂಖ್ಯೆಯನ್ನು ನಿಯಂತ್ರಿಸಿ ಮನೆಯನ್ನು ದೇಶವನ್ನು ಉಜ್ವಲವಾಗಿ ಬೆಳಗಿಸುವುದು ನಮ್ಮೆಲ್ಲರ ಕರ್ತವ್ಯ. ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರತಿಯೊಬ್ಬ ಪ್ರಜೆಯೂ ಸ್ಪಂದಿಸುವುದು ಅಗತ್ಯ. ಹಾಗಾದಾಗ ಮಾತ್ರ ತಮ್ಮ ದೇಶವು ಮುಂದುವರಿದ ರಾಷ್ಟçಗಳಲ್ಲಿ ಒಂದಾಗಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ.