ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು:
ಹೇಳುವುದೇ ಗಾದೆಗಳ ವೈಶಿಷ್ಟ್ಯ. ಗಾದೆಗಳನ್ನು ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವಾಗ, ಬುದ್ಧಿವಾದ
ಹೇಳುವಾಗ ತಪ್ಪನ್ನು ಎತ್ತಿ ತಿಳಿ ಹೇಳುವಾಗ, ವಿಶೇಷ ಗುಣಗಳ ಮಹತ್ತ್ವವನ್ನು ವಿವರಿಸುವಾಗ
ಗಾದೆಗಳನ್ನು ಬಳಸುತ್ತೇ ವೆ. ಅಂತಹ ಗಾದೆಗಳಲ್ಲಿ ಒಂದಾದ್ದು, ‘ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು:
ಸ್ವರ್ಗ ಎನ್ನುವ ಒಂದು ಲೋಕವಿದೆ. ಅಲ್ಲಿ ಸಕಲ ಸುಖಗಳು ಲಭಿಸುತ್ತವೆ. ಪುಣ್ಯವಂತರು ¸ಸ್ವರ್ಗಕ್ಕೆ
ಹೋಗುತ್ತಾರೆ ಪಾಪಿಗಳು ನರಕಕ್ಕೆ ಸೇರುತ್ತಾರೆ - ಎನ್ನುವ ಕಲ್ಪನೆ ಮತ್ತು ನಂಬಿಕೆಗಳು ಸಾಮಾನ್ಯವಾಗಿವೆ.
ಸ್ವರ್ಗವೆಂದರೆ ಸಮಸ್ತ ಸಂತಸ, ಸೌಲಭ್ಯಗಳು ದೊರಕುವ ತಾಣವೆಂದು ನಂ ಬಲಾಗಿದೆ.
ನಮ್ಮನ್ನು ಹೆತ್ತು ಹೊತ್ತ ತಾಯಿ ತನ್ನ ಕಂದನಿಗಾಗಿ ತನ್ನೆಲ್ಲಾ ಆಸೆ ಆಮಿಷಗಳನ್ನು ತೊರೆಯುತ್ತಾಳೆ.
ಮಗುವಿನ ಸುಖಕ್ಕಾಗಿ, ಏಳ್ಗೆಗಾಗಿ ಹಗಲು ರಾತ್ರಿ ಶ್ರಮಿಸುತ್ತಾಳೆ. ತಾಯಿಯ ಮಡಿಲಿನಲ್ಲಿ, ಆಸರೆಯಲ್ಲಿ
ದೊರೆಯುವ ಸುಖ ಸಂತೋಷ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಹಾಗೆಯೇ, ನಾವು ಹುಟ್ಟಿ ಬೆಳೆಯುವ ನಾಡು ನಮ್ಮ ಬದುಕಿಗೆ ದಾರಿತೋರಿ ನೆಮ್ಮದಿಯಿಂದ ಜೀವಿಸುವಂತೆ ಮಾಡುತ್ತದೆ. ಹೀಗಾಗಿ ತಾಯಿಯ ಮಡಿಲಲ್ಲಿ, ದೇಶದ ಎಡೆಯಲ್ಲಿ ಸ್ವರ್ಗಸುಖವನ್ನು ಅನುಭವಿಸಬಹುದಾಗಿದೆ. ಆದ್ದರಿಂದಲೇ ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು: ಎಂದು ಆದಿಕವಿ ವಾಲ್ಮೀಕಿಯೇ ಶ್ರೀರಾಮನಿಂದ ಹೇಳಿಸಿದ್ದಾರೆ.