ಕೂಡಿಬಾಳಿದರೆ ಸ್ವರ್ಗ ಸುಖ.
ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬ
ಗಾದೆ ಮಾತೇ, ಗಾದೆ ಬಗೆಗಿನ ವಿಶೇಷತೆಯನ್ನು ತಿಳಿಸುತ್ತದೆ. ಅಂತಹ ಗಾದೆಗಳಲ್ಲಿ ಒಂದಾದದ್ದು,
‘ಕೂಡಿಬಾಳಿದರೆ ¸ಸ್ವರ್ಗ ಸುಖ’.
ಗಾದೆ ಮಾತೇ, ಗಾದೆ ಬಗೆಗಿನ ವಿಶೇಷತೆಯನ್ನು ತಿಳಿಸುತ್ತದೆ. ಅಂತಹ ಗಾದೆಗಳಲ್ಲಿ ಒಂದಾದದ್ದು,
‘ಕೂಡಿಬಾಳಿದರೆ ¸ಸ್ವರ್ಗ ಸುಖ’.
‘ಕೂಡಿ ಬಾಳುವುದು’ ಎಂದರೆ ಒಗ್ಗಟಾಗ್ಟಿ ದ್ವೇಷ-ಜಗಳಗಳಿಲ್ಲದೆ, ಅನ್ಯೋನ್ಯತೆಯಿಂದ
ಜೀವಿಸುವುದು ಎಂದರ್ಥ. ಮನೆಯಲ್ಲಿರುವವರು, ಊರು, ರಾಜ್ಯ, ರಾಷ್ಟ್ರ ವಾಸಿಗಳೆಲ್ಲರಿಗೂ ಈ ಮಾತು
ಅನ್ವಯವಾಗುತ್ತದೆ. ಮನೆಯಲ್ಲಿ ಹಿರಿಯರಿಂದ ಕಿರಿಯರವರೆಗೆ ರಕ್ತಸಂಬಂಧಿಗಳು, ಊರಿನ
ನೆರೆಹೊರೆಯವರು, ರಾಜ್ಯ-ರಾಜ್ಯಗಳು, ಅಕ್ಕಪಕ್ಕದ ರಾಷ್ಟ್ರಗಳು ಪರಸ್ಪರ ಹೊಂದಿಕೆಯಿಂದ,
ಹಗೆತನವಿಲ್ಲದೆ, ಹೊಡೆದಾಟ-ಕಾದಾಟವಿಲ್ಲದೆ ಜೀವಿಸಿದರೆ ಆಗ ಎಲ್ಲರಿಗೂ ¸ಸ್ವರ್ಗ ಸುಖ ಲಭಿಸುತ್ತದೆ.
ಅಸಹನೆ, ಅಸಹಕಾರಗಳಿಲ್ಲದ, ಶಾಂತಿ-ಸಹನೆ-ಸಹಕಾರಗಳಿರುವ ಬದುಕು, ಸಂತಸ, ಸಮಾಧಾನಗಳಿಂದ
ತುಂಬಿರುತ್ತದೆ. ಇದಕ್ಕಿಂತ ಮಿಗಿಲಾದ ¸ಸ್ವರ್ಗ ಸುಖ ಬೇರೆ ಇರದು. ಪರಸ್ಪರ ಅಸೂಯೆ, ಹಗೆತನ,
ಹೊಡೆದಾಟ, ಮೇಲಾಟ ಮೊದಲಾದವು ಅಶಾಂತಿ-ಅಸಮಾಧಾನಗಳಿಗೆ ಎಡೆ ನೀಡುತ್ತವೆ. ನೆಮ್ಮದಿಯಿರದ ಇಂತಹ ಬದುಕು ನರಕ ಸದೃಶವಾಗುತ್ತದೆ. ಹೀಗಿರದ ಸಹಮತದ, ಅನ್ಯೋನ್ಯತೆ ಮತ್ತು ಕೂಡಿ ಬಾಳುವಿಕೆಯಿಂದ ಸ್ವರ್ಗಸುಖವನ್ನು ಪಡೆಯಬಹುದಾಗಿದೆ.
ಜನರ ನಡೆನುಡಿಗಳೇ ಅವರ ಸುಖ-ದುಃಖಗಳಿಗೆ, ¸ಸ್ವರ್ಗ ನರಕಗಳಿಗೆ ಕಾರಣವಾಗುತ್ತದೆ . ಸುಖ-
ಸಂತೋಷವನ್ನು ಹೊಂದಬೇಕಾದರೆ ಕೂಡಿ ಬಾಳಬೇಕು ಎಂಬ ಹಾದಿಯನ್ನು ಈ ಗಾದೆ ನಿರ್ದೇಶಿಸುತ್ತದೆ.