ಗ್ರಾಮ ಸ್ವರಾಜ್ಯ
ಪೀಠಿಕೆ :
ಪ್ರತಿಯೊಂದು ಗ್ರಾಮಗಳು ಸ್ವತಂತ್ರವಾಗಿ ಸ್ವಯಂ ಆಗಿ ಆಡಳಿತದ ಕೇಂದ್ರಗಳಾಗಿ, ತಮ್ಮ ಗ್ರಾಮದ ಸಮಗ್ರ ಅಭಿವೃದ್ಧಿ ಮತ್ತು ಸುಭಿಕ್ಷ ತೆಗೆ ಅವಕಾಶ ಮಾಡಿಕೊಳ್ಳುವುದೇ ಗ್ರಾಮ ಸ್ವರಾಜ್ಯ. ‘ಗ್ರಾಮಗಳ ಅಭಿವೃದ್ಧಿಯೇ ಭಾರತದ ಅಭಿವೃದಿ’್ಧ ಎಂದು ಗಾಂಧೀಜಿ ಸ್ವರಾಜ್ಯದ ಕನಸು ಕಂಡಿದ್ದರು.
ವಿಷಯ ನಿರೂಪಣೆ :
ಗ್ರಾಮಗಳ ಸ್ವರಾಜ್ಯದ ಕಲ್ಪನೆ ರಾಮಾಯಣ, ಮಹಾಭಾರತಗಳಲ್ಲೇ ಕಂಡುಬರುತ್ತದೆ. ಪ್ರಾಚೀನ ಕಾಲದಿಂದಲೂ ಗ್ರಾಮದ ಮುಖಂಡರು ಸೇರಿ ತಮ್ಮ ಗ್ರಾಮದ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುತ್ತಿದ್ದನ್ನು ಇತಿಹಾಸದಲ್ಲಿ ನೋಡಬಹುದು. ಪ್ರತಿ ಗ್ರಾಮಗಳು ಸ್ವಾವಲಂಬನೆಯಿAದ ಇರಬೇಕಾದರೆ, ತಮ್ಮ ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಗ್ರಾಮದ ಜನರೆಲ್ಲ ಆಡಳಿತದಲ್ಲಿ ಪಾಲ್ಗೊಳ್ಳಬೇಕು. ಸಲಹೆ, ಸಹಕಾರ, ಸಂಪನ್ಮೂಲಗಳನ್ನು ನೀಡಬೇಕು ಮತ್ತು ಆಡಳಿತದ ಮುಖ್ಯಸ್ಥರು ಪಡೆದು ಸದುಪಯೋಗ ಮಾಡಬೇಕು ಅಂದಾಗ ಮಾತ್ರ ಗ್ರಾಮಸ್ವರಾಜ್ಯದ ಪರಿಕಲ್ಪನೆ ಅರ್ಥಪೂರ್ಣವಾಗುತ್ತದೆ. ತಮ್ಮ ಗ್ರಾಮದ ಸ್ವಚ್ಛತೆ, ನೀರಿನ ಸೌರ್ಯ, ಶಿಕ್ಷಣದ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ, ರಸ್ತೆಗಳ ನಿರ್ಮಾಣ ಮುಂತಾದ ವ್ಯವಸ್ಥೆಗಳನ್ನು ಗ್ರಾಮದವರೆಲ್ಲ ಒಟ್ಟಾಗಿ ಮಾಡಿಕೊಂಡರೆ ಗ್ರಾಮಗಳ ಅಭಿವೃದ್ಧಿ ಸಾಧ್ಯವೆಂದು ಹೇಳಬಹುದು.
ಉಪಸಂಹಾರ : ಭಾರತ ಗ್ರಾಮಗಳ ದೇಶ. ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದೀತು. ಆದ್ದರಿಂದ ಗ್ರಾಮಗಳ ಅಭಿªüÀÈದ್ಧಿಗೆ ಅವಶ್ಯವಾದ ಸಂಪನ್ಮೂಲಗಳನ್ನು ಕೇಂದ್ರ ಮತ್ತು ್ತ ರಾಜ್ಯ ಸರ್ಕಾರಗಳು ಒದಗಿಸಿಕೊಟ್ಟಾಗ ಗ್ರಾಮ ಸ್ವರಾಜ್ಯ ಸಾಧ್ಯ.