ಪದ್ಯಪಾಠ -1. ಸಂಕಲ್ಪಗೀತೆ
ಘಟಕ ಪರೀಕ್ಷೆ-2025-26 ಅಂಕಗಳು -30
(2015 ರಿಂದ 2025 ರವರೆಗಿನ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳನ್ನು ಆಧರಿಸಿದೆ )
I ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 1 x 6 = 6
1.ಕವಿ ಶಿವ ರುದ್ರಪ್ಪನವರ ಪ್ರಕಾರ ಪ್ರತಿಯೊಬ್ಬ ಮನುಷ್ಯನು ಯಾವ ಎಚ್ಚರದಲ್ಲಿ ಬದುಕಬೇಕು?
[2017 RF 2024(1)]
2. ಜಿ.ಎಸ್. ಶಿವರುದ್ರಪ್ಪ ಅವರು ಬರಡಾಗಿರುವ ಕಾಡು ಮೇಡು ಗಳನ್ನು ಹೇಗೆ ಮುಟ್ಟೋಣ ಎಂದಿದ್ದಾರೆ
[2021 RF]
3. ಜಿ.ಎಸ್. ಶಿವರುದ್ರಪ್ಪನವರು ಎಚ್ಚರದಲ್ಲಿ ಮುನ್ನಡೆಸಬೇಕೆಂದಿರುವುದು ಯಾವುದನ್ನು ? [2021 RF]
4.ಕಲುಷಿತವಾದೀ ನದೀಜಲಗಳಿಗೆ ಏನಾಗಬೇಕು ? [2021RR]
5. ಕವಿ ಜಿ.ಎಸ್. ಶಿವರುದ್ರಪ್ಪನವರು ಭಯ-ಸಂಶಯದೊಳು ಕಂದಿದ ಕಣ್ಣೊಳು ಬಿತ್ತೋಣವೆಂದಿರುವುದು
[2021RR]
6. ನದೀಜಲಗಳು ಏನಾಗಿವೆ? [2022 RF]
II ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 2 x 2 = 4
1 ಹೊಸಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕೆಂದು ಜಿ.ಎಸ್.ಶಿವರುದ್ರಪ್ಪನವರು ಹೇಳಿದ್ದಾರೆ ? 2024 (1)
2 ನಾಳಿನ ಕನಸನು ಬಿತ್ತಬೇಕಾದರೆ ನಾಔಉ ಹೇಗೆ ಬದುಕಬೇಕೆಂದು ಕವಿ ಜಿ.ಎಸ್.ಶಿವರುದ್ರಪ್ಪನವರು ಹೇಳಿದ್ದಾರೆ ?
2024 (3)
III ಸಂದರ್ಭದ ಪ್ರಶ್ನೆಗಳು. ( ಯಾವುದಾದರೂ ಒಂದು ಪ್ರಶ್ನೆಗೆ ) 3 x 1 = 3
೧.“ಹೊಸ ಭರವಸೆಗಳ ಕಟ್ಟೋಣ” [2017 RF]
೨.“ವಸಂತವಾಗುತ ಮುಟ್ಟೋಣ” [2020RF]
೩.“ಪ್ರೀತಿಯ ಹಣತೆಯ ಹಚ್ಚೋಣ” [2022RF, 2024 (3) ]
IV 8 / 10 ವಾಕ್ಯದ ಪ್ರಶ್ನೆಗಳು. ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. 4 x 1 = 4
1.ಕವಿ ಜಿ.ಎಸ್. ಶಿವರುದ್ರಪ್ಪನವರು ಆಶಿಸಿದಂತೆ ನಾವು ಕೈಗೊಳ್ಳಬೇಕಾದ ಸಂಕಲ್ಪವನ್ನು ವಿವರಿಸಿ. [2017RR]
2. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂದು ಜಿ.ಎಸ್. ಶಿವರುದ್ರಪ್ಪ ನವರ ಆಶಯವಾಗಿದೆ?ವಿವರಿಸಿ.
[2019Rf, 2023RR , 2025 (1) ]
3.ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಬರೆಯಿರಿ
[2017RR ,2019RF, 2023RR ,2025 (1) ]
V ಕಂಠಪಾಠದ ಪದ್ಯ. ( ಯಾವುದಾದರೂ ಒಂದು ಪ್ರಶ್ನೆಗೆ ) [2015RF ,2015RR,2022RR] 4 x 1 = 4
1.ಕಲುಷಿತವಾದಿ______ 2 ಮತಗಳೆಲ್ಲವೂ_______
_________________ ಅಥವಾ ______________
________________ ______________
ವಸಂತವಾಗುತ ಮುಟ್ಟೋಣ. ನಾಳಿನ ಕನಸನು ಬಿತ್ತೋಣ.
VI ಭಾವಾರ್ಥದ ಪದ್ಯಗಳು. ( ಯಾವುದಾದರೂ ಒಂದು ಪ್ರಶ್ನೆಗೆ ) 4 x 1 = 4
1.ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ [2016RF ,2019RR]
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ
2. ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ [2016RR ,2018RF]
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ
3.ಸುತ್ತಲೂ ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು [2018RR] 2025(2)
ಎಚ್ಚರದಲ್ಲಿ ಮುನ್ನೆಡೆಸೋಣ.
4 ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ. 2024 (2)
VII ಕವಿ ಪರಿಚಯ : 3 x 1 = 3
1 ಜಿ.ಎಸ್. ಶಿವರುದ್ರಪ್ಪ [2020RR , 2023RF]