ಪದ್ಯಪಾಠ - 1 ಸಂಕಲ್ಪಗೀತೆ ಸಾರಾಂಶ
ಹತ್ತನೆಯ ತರಗತಿ ಪ್ರಥಮಭಾಷೆ ಕನ್ನಡ
ಕೃತಿಕಾರರ ಪರಿಚಯ
ಜಿ.ಎಸ್.ಶಿವರುದ್ರಪ್ಪ ಎಂದೇ ಪ್ರಸಿದ್ಧರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ (ಕ್ರಿ.ಶ. ೧೯೨೬) ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು
ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂರ್ಯ ಸಮೀಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಇವರುಕಾವ್ಯಾರ್ಥಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸಿ,ರಾಷ್ಟ್ರಕವಿ ಅಭಿಧಾನ ಮತ್ತು ಪಂಪ ಪ್ರಶಸ್ತಿಗೆ ಪಾತ್ರರಾಗಿದ್ದಾರೆ
ಪ್ರವೇಶ :
“ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತ್ತಿತ್ತು ಧೀರರ ದಂಡು” ಎಂಬ ವಾಕ್ಯ ಹಿಂದಿನ ತಲೆಮಾರಿನ ಯುವಕರಿಗಿದ್ದ ನೆಲೆಯನ್ನು ತಿಳಿಸುತ್ತದೆ. ಹೋಗಬೇಕಾದ ದಾರಿ ತಲುಪಬೇಕಾದ ಗುರಿ ¸ವಾಗಿದ್ದರೆ ಅರ್ಧ ಯಶಸ್ಸನ್ನು ಪಡೆದಂತೆ. ‘ಸ್ವಾತಂತ್ರö್ಯ ನನ್ನ ಆಜನ್ಮಸಿದ್ಧ ಹಕ್ಕು’ ಎಂದ ತಿಲಕರು, ಸ್ವಾತಂತ್ರö್ಯಗಳಿಸುವುದೇ ಜೀವನದ ಏಕೈಕ ಸಂಕಲ್ಪ ಎಂದುಕೊAಡ ರಾಷ್ಟ್ರಪಿತ ಗಾಂಧೀಜಿ ಸಾಧಕರೆನಿಸಿಕೊಂಡರು. ಇತಿಹಾಸ ದಾಖಲಿಸುವುದು, ನೆನಪಿಸುವುದು ಇಂತಹ ಸಾಧಕರನ್ನು. ಸಾಧಕನು ತಾನು ಕಂಡ ಕನಸನ್ನು ಅದೆಷ್ಟೇ ತೊಡಕುಗಳು ಬಂದರೂ ಅಡ್ಡಿಆತಂಕಗಳು ಎದುರಾದರೂ ನನಸಾಗಿಸುತ್ತಾನೆ. ಹೀಗೆ ಸಂಕಲ್ಪದತ್ತ ದೃಢನಿರ್ಧಾರದಿಂದ ಕಾರ್ಯಶೀಲರಾದರೆ “ಅಸಾಧ್ಯವಾದುದು ಯಾವುದೂ ಇಲ್ಲ.” ದೃಢ ಸಂಕಲ್ಪದಿAದ ಏನೇನನ್ನು ಸಾಧಿಸಬಹುದೆಂಬುದನ್ನು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ‘ಸಂಕಲ್ಪ’ ಎಂಬ ಭಾವಗೀತೆಯಲ್ಲಿ ಸರಳವಾಗಿ, ಸುಂದರವಾಗಿ ಅಭಿವ್ಯಕ್ತಿಸಿದ್ದಾರೆ.
ಆಶಯಆಶಯ ಭಾವ
ಜೀವನದಲ್ಲಿ ಧನಾತ್ಮಕ ಭಾವನೆಯನ್ನು, ದೃಢಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ. ಭೇದಭಾವಗಳನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲ ವರ್ಧಿಸುತ್ತದೆ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢನಿಷ್ಠೆಯಿಂದ ಸ್ವಾಸ್ಥ್ಯದ ನೆಲೆಯಾಗಿಸುವ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ ಎಂಬುದನ್ನು ಭಾವಗೀತೆಯ ಮೂಲಕ ವ್ಯಕ್ತಗೊಳಿಸುವುದೇ ಈ ಕವನದ ಆಶಯವಾಗಿದೆ
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ. || ೧ ||
ನಮ್ಮ ಸುತ್ತಲೂ ಹಬ್ಬಿರುವ ಜಾತೀಯತೆ, ಮತ, ಭಾಷೆ,ಬಣ್ಣ, ಅಜ್ಞಾನ, ದ್ವೇಷ ಮತ್ತು, ಮೂಢನಂಬಿಕೆಗಳೆ೦ಬ ಅಂಧಕಾರದ ಕತ್ತಲೆಯು ನಮ್ಮ ಸುತ್ತಲೂ ಕವಿದಿರುತ್ತದೆ, ಆದುದರಿಂದ ಆ ಕತ್ತಲೆಯನ್ನು ಓಡಿಸಲು ಬೆಳಕಿನ (ಅರಿವಿನ) ಅವಶ್ಯಕತೆಯಿದೆ. ಆಕತ್ತಲೆಯನ್ನು ಕಳೆಯಲು, ಪ್ರೀತಿ ಮತ್ತು ಜ್ಞಾನದ ದೀಪವನ್ನು ಹಚ್ಚುವ ಮೂಲಕ ದ್ವೇಷರಹಿತ ಸಮಾಜ ನಿರ್ಮಾಣ ಮಾಡೋಣ..
ಸಂಸಾರ ಸಂಸಾರ ಸಾಗರದಲ್ಲಿ ಅಜ್ಞಾನದ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತ ಎತ್ತೆತ್ತಲೋ ಸಾಗುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನಾದರೂ ಧೈರ್ಯವಾಗಿ ಎದುರಿಸಬಹುದು - ಎಂಬುದು ಕವಿಯ ಆಶಯವಾಗಿದೆ.
ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ.
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ. || ೨ ||
ಆಧುನಿಕ ಮಾನವನ ಹಸ್ತಕ್ಷೇಪದಿಂದ ಕಲುಷಿತವಾದ ನದಿಗಳ ಶುದ್ಧೀಕರಣ ಮಾಡಲು ಭೋರ್ಗರೆಯುವ ಮುಂಗಾರಿನ ಮಳೆಯೇ ಬೇಕು. ಅಂದರೆ ಅಲ್ಲಲ್ಲಿ ನಿಂತ ಕಲುಷಿತ ನೀರು,ಕೊಚ್ಚೆಗಳನ್ನು ಕೊಚ್ಚಿ ತೆಗೆದು ಶುದ್ಧೀಕರಿಸಬಹುದು. ಹಾಗೆಯೇ ಕಲ್ಮಷಗಳಿಂದ ಕೂಡಿದ ಮನುಷ್ಯರ ಮನಸು ್ಸಗಳನ್ನು ಪ್ರೀತಿಯ ಮೂಲಕ ಹಸನಗೊಳಿಸೋಣ. ಆಧುನೀಕರಣ ,ಜಾಗತೀಕರಣ,ಕೈಗಾರೀಕರಣ, ಡಾಂಬರೀಕರಣ, ಯಾಂತ್ರೀಕರಣಗಳಿAದಾಗಿ ಕಾಡುಗಳು ನಾಶವಾಗಿ ಹಾಳುಬಿದ್ದಿವೆ ಪರಿಸರ ಬರಡಾದ ಮರುಭೂಮಿಯಂತಾಗಿದೆ.ಅಲ್ಲಿ ಗಿಡಮರಗಳನ್ನು ಬೆಳೆಸುತ್ತ, ಬೆಳೆಸುವ ಅವಶ್ಯಕತೆಯನ್ನು ಜನರಲ್ಲಿ ಜಾಗೃತಗೊಳಿಸುವ ಕಾರ್ಯವನ್ನು ಮಾಡೋಣ ಎನ್ನಬಹುದು. ಅಂದರೆ ನಾಗರೀಕತೆಯ ಬರಾಟೆಯಲ್ಲಿ ಮೌಲ್ಯಗಳು ಕುಸಿಯುತ್ತಿವೆ,ಅಂತಹ ಹೃದಯದಲ್ಲಿ ಮೌಲ್ಯಗಳೆಂಬ ಸಸಿಗಳನ್ನು ನೆಟ್ಟು ,ಪ್ರೀತಿಯ ನೀರನ್ನು ಎರೆಯುತ್ತ ಬದುಕನ್ನು ಸಮೃದ್ಧವಾಗಿಸೋಣ ಎಂದು ಬದುಕು ಹಸನುಗೊಳಿಸುವ ಮೌಲ್ಯವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರು ಹೇಳಿದ್ದಾರೆ.
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ. || ೩ ||
ಕುಸಿದು ಹೋಗಿರುವ ಮೌಲ್ಯಗಳನ್ನು ಮತ್ತೆ ಎಬ್ಬಿಸಿ ನಿಲ್ಲಿಸಬೇಕು, ಬಡತನ, ಅಜ್ಞಾನ, ಮೂಢನಂಬಿಕೆ, ಧರ್ಮ, ಭಾಷೆ,ಜಾತಿಗಳಿಂದ ಶೋಷಣೆಗೊಳಗಾದ ಜನರನ್ನು ಎಲ್ಲರಂತೆ ̧ಸಮಾನವಾಗಿ ಬದುಕಲು ಆಸರೆ ನೀಡಿ ಮೇಲೆ ತರಬೇಕು. ಅವರ ಮನಸ್ಸಿನಲ್ಲಿ ಬದುಕುವ ಹೊಸ ಭರವಸೆಗಳನ್ನು ಕಟ್ಟಿ ಕೊಡಬೇಕು. ಹಾಗೆಯೇ ಮನುಷ್ಯರ ನಡುವೆ ಜಾತಿ, ಧರ್ಮ, ಭಾಷೆ,ವರ್ಣಗಳಿಂದ ಆವೃತವಾದ ಅಡ್ಡಗೋಡೆಗಳನ್ನು ಕೆಡವಿಹಾಕಬೇಕು. ವಿಶ್ವದ ಜನರೆಲ್ಲರನ್ನು ಒಂದಾಗಿಸುವ ಪ್ರೀತಿಯ, ಸ್ನೇಹದ ಸೇತುವೆಯನ್ನು ನಿರ್ಮಿಸೋಣವೆಂದು ಕವಿ ಜಿ.ಎಸ್.ಶಿವರುದ್ರಪ್ಪನವರು ಸಮಾನತೆಯ ಮೌಲ್ಯವನ್ನು ಹೇಳಿದ್ದಾರೆ
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ. || ೪ ||
ಭಾರತದಲ್ಲಿ ವಿವಿಧ ಮತಪಂಥಗಳಿದ್ದು ಬೇರೆಬೇರೆ ರೀತಿಯ ಆಚರಣೆ,ಸಂಪ್ರದಾಯಗಳು ಇವೆ.ಆದರೂ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ಭಾರತ .ಇಂತಹ ಮತಪಂಥಗಳೆಲ್ಲವೂ ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನುನೀಡಬಲ್ಲ, ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗಗಳೆಂದು ತಿಳಿಯ ಬೇಕು. ಅಸಮಾನತೆ, ಭಯೋತ್ಪಾದಕತೆ, ಶೋಷಣೆ ಇತ್ಯಾದಿಗಳಿಂದ ಭಯ-ಭೀತಿಗೊಂಡು, ನಾಳಿನ ಬದುಕಿನ ಬಗ್ಗೆ ಸಂಶಯಗೊAಡು, ಮಸುಕಾದ ಕಣ್ಣುಗಳಿಗೆ ನಿರಾಸೆ ಹೊಂದಿದ ಮನಸ್ಸುಗಳಿಗೆ ಮುಂದಿನ ಬದುಕಿಗೆ, ಉತ್ತಮ ಕನಸನ್ನು ಅವರಲ್ಲಿ ಬಿತ್ತಿ, ಧೈರ್ಯ ನೀಡಬೇಕೆಂದು ̧ಸಮಾನತೆಯ ತತ್ವ ಮತ್ತು ಒಳ್ಳೆ ಬದುಕಿನ ಭರವಸೆಯ ಬಗ್ಗೆ ಜಿ.ಎಸ್.ಶಿವರುದ್ರಪ್ಪನವರು ಅರಿವು ಮೂಡಿಸಿದ್ದಾರೆ.