ಗದ್ಯಪಾಠ - 8 ಅಗ್ನಿಭೂತಿ ವಾಯುಭೂತಿಯರ ಕಥೆ.
ಘಟಕ ಪರೀಕ್ಷೆ-2025-26 ಅಂಕಗಳು : 25
(2015 ರಿಂದ 2025 ರವರೆಗಿನ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳನ್ನು ಆಧರಿಸಿದೆ )
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 1 x 5 = 5
1. ಕೌಸಂಬಿಯ ಅರಸ ಯಾರು?
2. ಸೋಮಶರ್ಮ ಕಾಶ್ಯಪಿಯರ ಮಕ್ಕಳ ಹೆಸರೇನು?
3. ಕಾಶ್ಯಪಿ ವಿದ್ಯಾಭ್ಯಾಸಕ್ಕಾಗಿ ತನ್ನ ಮಕ್ಕಳನ್ನು ಯಾರ ಬಳಿಗೆ ಕಳುಹಿಸಿದಳು?
4. ಸೂರ್ಯಮಿತ್ರನು ತನಗೆ ಕಾಶ್ಯಪಿಯೆಂಬ ತಂಗಿಯಿಲ್ಲ ಎಂದು ಹೇಳಲು ಕಾರಣವೇನು? [2025(1)]
5. ಪಂಡಿತರಾದ ಅಗ್ನಿಭೂತಿ ವಾಯುಭೂತಿಯರಿಗೆ ದೊರೆತ ಪದವಿ ಯಾವುದು?
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ 2 x 4 = 8
1. ರಾಜಸಭೆಯಲ್ಲಿ ಅಗ್ನಿಭೂತಿ ವಾಯುಭೂತಿಯರನ್ನು ಮೂರ್ಖರೆಂದು ತೀರ್ಮಾನಿಸಿದ್ದೇಕೆ?
2. ಅಗ್ನಿಭೂತಿ ವಾಯುಭೂತಿಯರು ಸೂರ್ಯಮಿತ್ರನಿಂದ ಕಲಿತ ವಿದ್ಯೆಗಳಾವುವು?
3. ಸೂರ್ಯಮಿತ್ರನು ಅಗ್ನಿಭೂತಿ ವಾಯುಭೂತಿಯರಿಗೆ ವಿದ್ಯಾಭ್ಯಾಸದ ನಂತರ ಮಾವನೆಂದು ಹೇಳಲು
ಕಾರಣವೇನು?
4. ಸೂರ್ಯಮಿತ್ರನು ಮಾವನೆಂದು ತಿಳಿದಾಗ ವಾಯುಭೂತಿಯ ಪ್ರತಿಕ್ರಿಯೆ ಹೇಗಿತ್ತು?
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:(ಯಾವುದಾದರೂ ಒಂದಕ್ಕೆ ಮಾತ್ರ )
4 x 1=4
1. ಸಪ್ತವ್ಯಸನಿಗಳಾಗಿದ್ದ ಅಗ್ನಿಭೂತಿ ವಾಯುಭೂತಿಯರು ಪಂಡಿತರಾದುದು ಹೇಗೆ?
2. ಸೂರ್ಯಮಿತ್ರನು ತಮ್ಮ ಮಾವನೆಂದು ತಿಳಿದಾಗ ಅಗ್ನಿಭೂತಿ ವಾಯುಭೂತಿಯರಲ್ಲಿ ಮೂಡಿದ
ಭಾವನೆಗಳೇನು? ವಿವರಿಸಿ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. :(ಯಾವುದಾದರೂ ಎರಡಕ್ಕೆ ಮಾತ್ರ ) 3 x 2 = 6
1. “ಕಣ್ಣ ನೀರಂ ತೀವಿ ನೆಲನಂ ಬರೆಯುತ್ತಿರೆ”
2. “ವಿದ್ಯಾರ್ಥಿಗಳಾಗಿಯೋದಂ ಕಲ್ವೆಮೆಂಬ¿್ತಯೊಳ್ ಬಂದಿರಪ್ಪೊಡೆ ” [2025(1)]
3. “ಪಸರಂಗೊಟ್ಟೆನಿಲ್ಲಿದರ್ಕ್ಕೆ ಮುಳಿಯದಿರಿಂ”
4. “ಪಂಡಿತಜನಮೆಲ್ಲಂ ಮೆಚ್ಚಿ ಬಿಚ್ಚಳಿಸಿ”
ಉ) ಕೃತಿಕಾರರ ಪರಿಚಯ 1 x 2 = 2
1 ಶಿವಕೋಟ್ಯಾಚಾರ್ಯ