ಪದ್ಯಪಾಠ-೮. ಕೆಮ್ಮನೆ ಮೀಸೆವೊತ್ತೆನೇ
ಕವಿ-ಕೃತಿ ಪರಿಚಯ: ಮಹಾಕವಿ ಪಂಪ
ಪಂಪ ಮಹಾಕವಿಯು ವೆಂಗಿ ಮಂಡಲದ ವೆಂಗಿಪಳು ಎಂಬ ಅಗ್ರಹಾರದವನು. ಈತನ ಕಾಲ ಸಾ. ಶ. ೯೦೨ ಚಾಲುಕ್ಯರ ಅರಿಕೇಸರಿಯ ಆಸ್ಥಾನಕವಿಯಾಗಿದ್ದ ಪಂಪನು ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯಂ’ ಎಂಬ ಮಹಾಕಾವ್ಯಗಳ ಕರ್ತೃ.
ವಿಕ್ರಮಾರ್ಜುನ ವಿಜಯ ಕಾವ್ಯಕ್ಕೆ ಪಂಪಭಾರತ ಎಂಬ ಮತ್ತೊಂದು ಹೆಸರಿದೆ. ಕಲಿಯೂ ಕವಿಯೂ ಆಗಿದ್ದ ಪಂಪ ರತ್ನತ್ರಯರಲ್ಲಿ ಒಬ್ಬ. ‘ಸರಸ್ವತೀ ಮಣಿಹಾರ, ಸಂಸಾರ ಸಾರೋದಯ, ಕವಿತಾಗುಣಾರ್ಣವ’ ಎಂಬ ಬಿರುದುಗಳನ್ನು ಪಡೆದಿದ್ದ ಕವಿ. [ಪಂಪಮಹಾಕವಿ ವಿರಚಿತ ‘ವಿಕ್ರಮಾರ್ಜುನ ವಿಜಯಂ’ ಕಾವ್ಯವನ್ನು ಡಿ.ಎಲ್. ನರಸಿಂಹಾಚಾರ್ಯರು ಸಂಪಾದಿಸಿದ್ದು ಅದರ ದ್ವಿತೀಯಾಶ್ವಾಸದಿಂದ ‘ಕೆಮ್ಮನೆ ಮೀಸೆವೊತ್ತ್ತೆನೇ’ ಪದ್ಯಭಾಗವನ್ನು ಆಯ್ಕೆ ಮಾಡಲಾಗಿದೆ.]
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು?
ದ್ರೋಣನು ಪರಶುರಾಮರಲ್ಲಿಗೆ ದ್ರವ್ಯವನ್ನು(ಹಣವನ್ನು) ಬೇಡುವುದಕ್ಕಾಗಿ ಬಂದನು.
೨. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು.
೩. ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತçಗಳು ಯಾವುವು?
ಪರಶುರಾಮನು ದ್ರೋಣನಿಗೆ ವಾರುಣ, ವಾಯುವ್ಯ, ಆಗ್ನೇಯ, ಇಂದ್ರಾದಿ ಪ್ರಧಾನ ಅಸ್ತçಗಳನ್ನು ಕೊಟ್ಟನು.
೪. ದ್ರುಪದನು ಪಡಿಯರನಿಗೆ ಏನೆಂದು ಹೇಳಿ ಕಳುಹಿಸಿದನು?
ದ್ರುಪದನು ಪಡಿಯರನಿಗೆ(ದ್ವಾರಪಾಲಕನಿಗೆ) ಅಂತಹವನನ್ನು ನಾನು ತಿಳಿದಿಲ್ಲ; ಅವನನ್ನು ಹೊರಕ್ಕೆ ತಳ್ಳು ಎಂದು ಹೇಳಿದನು.
೫. ದ್ರೋಣನು ದ್ರವ್ಯವನ್ನು ಬೇಡಲು ಬಂದಾಗ ಪರಶುರಾಮನು ಎಲ್ಲಿಗೆ ಹೊರಟಿದ್ದನು?
ದ್ರೋಣನು ದ್ರವ್ಯವನ್ನು ಬೇಡಲು ಬಂದಾಗ ಪರಶುರಾಮನು ತಪೋವನಕ್ಕೆ ಹೊರಟಿದ್ದನು.
೬. ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಘ್ಯವನ್ನು ಕೊಡಲು ಕಾರಣವೇನು?
ಪರಶುರಾಮನ ಬಳಿ ಚಿನ್ನದ ಪಾತ್ರೆಗಳು ಇಲ್ಲದುದರಿಂದ ಮಣ್ಣಿನ ಪಾತ್ರೆಯಲ್ಲಿ ಅರ್ಘ್ಯವನ್ನು ನೀಡಿದನು.
೭. ಕುಂಭಸಂಭವ ಎಂದು ಹೆಸರಾದವರು ಯಾರು?
ಕುಂಭಸಂಭವ ಎಂದು ಹೆಸರಾದವರು ದ್ರೋಣ.
೮. ಭಾರ್ಗವ ಎಂದು ಹೆಸರಾದವರು ಯಾರು?
ಭಾರ್ಗವ ಎಂದು ಹೆಸರಾದವರು ಪರಶುರಾಮ.
೯. ಪರಶುರಾಮನು ಅವನೀತಳವನ್ನು ಯಾರಿಗೆ ನೀಡಿದನು?
ಪರಶುರಾಮನು ಅವನೀತಳವನ್ನು ತನ್ನ ಗುರುಗಳಿಗೆ ನೀಡಿದನು.
೧೦. ದ್ರೋಣನ ಬಾಲ್ಯದ ಒಡನಾಡಿ ಯಾರು?
ದ್ರೋಣನ ಬಾಲ್ಯದ ಒಡನಾಡಿ ದ್ರುಪದ.
೧೧. ದ್ರುಪದನು ಎಲ್ಲಿ ಆಳ್ವಿಕೆ ಮಾಡುತ್ತಿದ್ದನು?
ದ್ರುಪದನು ಛತ್ರಾವತಿ ಪಟ್ಟಣದಲ್ಲಿ ಆಳ್ವಿಕೆ ಮಾಡುತ್ತಿದ್ದನು.
೧೨. ದ್ರುಪದನಿಗೆ ಯಾವ ಮದವೇರಿತ್ತು?
ದ್ರುಪದನಿಗೆ ರಾಜ್ಯದ ಮದಿರೆಯ ಮದವೇರಿತ್ತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಘ್ಯವನ್ನು ಕೊಡಲು ಕಾರಣವೇನು?
ಪರಶುರಾಮನು ತನ್ನಲ್ಲಿದ್ದ ಎಲ್ಲವನ್ನು ಬೇಡಿದವರಿಗೆ ದಾನಮಾಡಿದ್ದರಿಂದ ಆತನ ಬಳಿ ಬಿಲ್ಲು-ಬಾಣಗಳಲ್ಲದೆ ಬೇರೇನೂ ಇರಲಿಲ್ಲ. ಆ ಸಂದರ್ಭದಲ್ಲಿ ದ್ರೋಣನು ಅಶ್ವತ್ಥಾಮನ ಜೊತೆಯಲ್ಲಿ ಏನಾದರು ದ್ರವ್ಯ ಬೇಡಲೆಂದು ಪರಶುರಾಮನ ಬಳಿಗೆ ಬಂದನು. ಆಗ ಪರಶುರಾಮನು ತನ್ನ ಬಳಿ ಚಿನ್ನದ ಪಾತ್ರೆಗಳಿಲ್ಲದುದರಿಂದ ದ್ರೋಣರಿಗೆ ಮಣ್ಣಿನ ಪಾತ್ರೆಯಲ್ಲಿಯೇ ಅರ್ಘ್ಯವನ್ನು ಕೊಟ್ಟನು.
೨. ದ್ರುಪದನು ದ್ರೋಣರಿಗೆ ಹೇಳಿದ ಮಾತುಗಳು ಯಾವುವು?
ದ್ರುಪದನು ದ್ರೋಣರಿಗೆ “ನೀನು ಯಾರೆಂದು ನನಗೆ ತಿಳಿದಿಲ್ಲ. ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ? ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕವಾಗುವಂತೆ ಹೀಯಾಳಿಸಿದನು.
೩. ದ್ರುಪದನ ಮಾತಿಗೆ ದ್ರೋಣನ ಪ್ರತ್ಯುತ್ತರವೇನು?
ದ್ರುಪದನ ಮಾತಿಗೆ ದ್ರೋಣನು `ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು' ಎನ್ನುವ ಗಾದೆಯಂತೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ. ಈ ಸಭಾವಲಯದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು, ನನ್ನ ಶಿಷ್ಯರಿಂದ ನೀನು ಬೆಚ್ಚುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ?” ಎಂದು ಪ್ರತ್ಯುತ್ತರ ಕೊಟ್ಟನು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯದಲ್ಲಿ ಉತ್ತರಿಸಿ:
೧. ದ್ರುಪದನಿಗೂ ದ್ರೋಣನಿಗೂ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ.
ದ್ರುಪದನು “ಅಂತಹವನನ್ನು ನಾನು ತಿಳಿದಿಲ್ಲ; ಅವನನ್ನು ಹೊರಕ್ಕೆ ತಳ್ಳು” ಎಂದು ದ್ವಾರಪಾಲಕನಿಗೆ ಹೇಳಿದಾಗ ದ್ವಾರಪಾಲಕನು ಬಂದು ಆ ರೀತಿಯಲ್ಲಿ ತಿಳಿಸಲಾಗಿ ದ್ರೋಣನು ಬಲವಂತವಾಗಿ ಒಳಕ್ಕೆ ಪ್ರವೇಶಿಸಿ ದ್ರುಪದನನ್ನು ನೋಡಿ `ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ' ಎನ್ನಲು ದ್ರುಪದನು ನಿನ್ನನ್ನು ನಾನು ತಿಳಿದಿಲ್ಲ, ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ?’ ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕವಾಗುವಂತೆ ಹೀಯಾಳಿಸಿದನು.
ಹಾಗೆ ಮಾಡಿದುದೂ ಅಲ್ಲದೆ ದ್ರುಪದನು “ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು ಹೊರಗೆ ನೂಕಿರಿ” ಎನ್ನಲು ದ್ರೋಣನು ಹೀಗೆಂದನು-“ಐಶ್ವರ್ಯ ಬರಲು ಮದ್ಯಪಾನ ಮಾಡಿದವರಂತೆ ಮಾತು ತೊದಲುವುದು; ಮುಖದಲ್ಲಿ ವಕ್ರಚೇಷ್ಟೆಯುಂಟಾಗುವುದು; ಮಾತುಗಳು ನಾಚಿಕೆಯಿಲ್ಲದಾಗುವುವು; ಸಂಬAಧವನ್ನು ಮರೆಯುವಂತೆ ಮಾಡುವುದು; ಆದುದರಿಂದ ಐಶ್ವರ್ಯವು ಕಳ್ಳಿನೊಡನೆ(ಹೆಂಡದೊಡನೆ) ಹುಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ತಟ್ಟನೆ ಈಗ ನಾನು ವಿಶದವಾಗಿ ತಿಳಿದೆನು. ಎಲೋ ಖಳನೇ ‘ನೊಣಕ್ಕೆ ಕಸವೇ ಶ್ರೇಷ್ಠವಾದುದು' ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾವಲಯದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನಿರಾಯಾಸವಾಗಿ, ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ?”
೨. ದ್ರೋಣನು ದ್ರುಪದನ ವಿರುದ್ಧ ಶಪಥ ಮಾಡಲು ಕಾರಣವಾದ ಅಂಶಗಳನ್ನು ವಿವರಿಸಿ.
ದ್ರೋಣನು ದ್ರುಪದನ ಅರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ನಿಮ್ಮ ಜೊತೆಯಲ್ಲಿ ಆಟವಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು ಎಂದು ಹೇಳಿ ಕಳುಹಿಸಿದಾಗ ದ್ರುಪದನು `ಅವನಾರೋ ನನಗೆ ತಿಳಿದಿಲ್ಲ. ಅವನನ್ನು ಹೊರಕ್ಕೆ ತಳ್ಳು’ ಎಂದು ಆದೇಶಿಸಿದನು. ಆದರೆ ದ್ರೋಣನು ಬಲವಂತವಾಗಿ ಒಳಕ್ಕೆ ನುಗ್ಗಿ ಬಂದು ದ್ರುಪದನಿಗೆ ಸಹಪಾಠಿಗಳಾಗಿದ್ದ ಸಂದರ್ಭವನ್ನು ಹೇಳಿದಾಗ ದ್ರುಪದನು “ನೀನಾರೋ ನನಗೆ ತಿಳಿದಿಲ್ಲ. ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ?” ಎಂದು ಹೀಯಾಳಿಸಿ ಮಾತನಾಡಿದ್ದನ್ನು ಕೇಳಿ ಕೋಪಗೊಂಡ ದ್ರೋಣನು “ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ. ಈ ಸಭಾವಲಯದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನೀನು ಬೆಚ್ಚುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ?” ಎಂದು ಶಪಥ ಮಾಡಿದನು.
ಈ) ಕೊಟ್ಟಿರುವ ಹೇಳಿಕೆಗಳಿಗೆ ಸಂದರ್ಭದೊಡನೆ ಸ್ವಾರಸ್ಯ ಬರೆಯಿರಿ:
೧. ‘ಈಗಳೊಂದಡಕೆಯುಮಿಲ್ಲ ಕೈಯೊಳ್’
ಆಯ್ಕೆ: ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ವಿಕ್ರಮಾರ್ಜುನ ವಿಜಯಂ’ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ಕೆಮ್ಮನೆ ಮೀಸೆವೊತ್ತೆನೇ’ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ: ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮನನ್ನೂ ಕರೆದುಕೊಂಡು ದೇಶದೇಶಗಳಲ್ಲೆಲ್ಲ ಸುತ್ತಿ ಪರಶುರಾಮನ ಬಳಿಗೆ ಬಂದು ಸಹಾಯ ಯಾಚಿಸಿದ ಸಂದರ್ಭದಲ್ಲಿ ಪರಶುರಾಮನು “ನನ್ನ ಪದಾರ್ಥಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು. ಭೂಮಂಡಲವನ್ನು ಗುರುಗಳಿಗೆ ಕೊಟ್ಟೆನು. ಈಗ ನನ್ನಲ್ಲಿ ಒಂದಡಕೆಯೂ ಇಲ್ಲ” ಎಂದು ದ್ರೋಣನಿಗೆ ಹೇಳುತ್ತಾನೆ.
ಸ್ವಾರಸ್ಯ: ದ್ರೋಣನು ತನ್ನ ಬಳಿ ಬಂದು ಸಹಾಯ ಯಾಚಿಸಿದಾಗ ಪರಶುರಾಮನು ಯಾವುದೇ ಮುಚ್ಚುಮರೆ ಇಲ್ಲದೆ ತನ್ನ ನಿಜ ಸ್ಥಿತಿಯನ್ನು ಹೇಳಿಕೊಳ್ಳುವುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೨. ‘ವಿದ್ಯಾಧನಮೆ ಧನಮಪ್ಪುದು’
ಆಯ್ಕೆ: ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ವಿಕ್ರಮಾರ್ಜುನ ವಿಜಯಂ’ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ಕೆಮ್ಮನೆ ಮೀಸೆವೊತ್ತೆನೇ’ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
೩. ‘ಎಂತು ನಾಣಿಲಿಗರಪ್ಪರೆ ಮಾನಸರ್’
೪. ‘ಜಲಕ್ಕನೀಗಳಱಿದೆಂ ಸಿರಿ ಕಳ್ಳೊಡವುಟ್ಟಿತೆಂಬುದA’
ಸಂದರ್ಭ: ತನ್ನ ಬಳಿ ಸಹಾಯ ಕೇಳಲು ಬಂದ ದ್ರೋಣನನ್ನು ಕುರಿತು ದ್ರುಪದನು “ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ?” ಎಂದು ಹೀಯಾಳಿಸಿದ ಸಂದರ್ಭದಲ್ಲಿ ದ್ರೋಣನು “ಐಶ್ವರ್ಯವೆಂಬ ಮದವೇರಿದರೆ ಮಾತು ತೊದಲುತ್ತದೆ; ಮುಖದಲ್ಲಿ ವಕ್ರತೆಯುಂಟಾಗುತ್ತದೆ; ಸಂಬAಧವನ್ನು ಮರೆಯುವಂತೆ ಮಾಡುವುದು; ಆದುದರಿಂದ ಐಶ್ವರ್ಯವು ಕಳ್ಳಿನೊಡನೆ(ಹೆಂಡದೊಡನೆ) ಹುಟ್ಟಿತು ಎಂಬುದನ್ನು ಈಗ ನಾನು ತಕ್ಷಣವೇ ಸ್ಪಷ್ಟವಾಗಿ ತಿಳಿದೆನು” ಎಂದು ಹೇಳುತ್ತಾನೆ.
೫. ‘ನೊಳವಿಂಗೆ ಕುಪ್ಪೆ ವರಂ’
ಸ್ವಾರಸ್ಯ: ‘ನೊಣಕ್ಕೆ ಕಸವೇ ಶ್ರೇಷ್ಠ’ ಎಂಬಂತೆ ವ್ಯಕ್ತಿಯ ಯೋಗ್ಯತೆಗೆ ತಕ್ಕಂತೆ ಗುಣ-ನಡತೆ-ಅಭಿರುಚಿಗಳಿರುತ್ತವೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ.